ಉಡುಪಿ ಶ್ರೀಮತಿ ವಿಂಧ್ಯಾ ಎಂ.ಎನ್. ಅವರು ಉಡುಪಿ ಜಿಲ್ಲೆಯ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿಯಾಗಿ ಅಧಿಕಾರ ಸ್ವೀಕರಿಸಿದ ಅವರನ್ನು ಇಂದು ಉಡುಪಿ ಜಿಲ್ಲಾ ಗಣಿ ಇಲಾಖೆಯ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅಭಿನಂದಿಸಿದರು
ಉಡುಪಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ *ಹಿರಿಯ ಭೂ ವಿಜ್ಞಾನಿ* ಹುದ್ದೆಗೆ ಸರಕಾರದ ಅಧಿಸೂಚನೆಯಂತೆ ವರ್ಗಾಯಿಸಲ್ಪಟ್ಟಿರುವ *ಶ್ರೀಮತಿ ವಿಂಧ್ಯಾ ಎಂ.ಎನ್.* ಅವರು ನಿನ್ನೆ ಅಧಿಕೃತವಾಗಿ ಉಡುಪಿಯಲ್ಲಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಭರವಸೆ ನೀಡಿದರು
ಜಿಲ್ಲೆಯಲ್ಲಿ ಹಿಂದೆ ಇದ್ದ ಭ್ರಷ್ಟ ಅಧಿಕಾರಿಯಿಂದಾಗಿ ಸರಕಾರಕ್ಕೆ ರಾಜಧನ ನಷ್ಟ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದೇ ಪ್ರಕರಣವನ್ನು ದಾಖಲಿಸದೆ ಇರುವ ಕಾರಣದಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುವ ಸ್ಥಿತಿ ಬಂದಿತ್ತು
ಇನ್ನು ಮುಂದೆ ಇಂಥ ಅಕ್ರಮ ಚಟುವಳಿಗೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಭೂ ವಿಜ್ಞಾನಿ ಶ್ರೀಮತಿ ವಿಂಧ್ಯಾ ಅವರಿಗೆ ಮನವಿ ನೀಡಲಾಯಿತು
ಈ ಹಿಂದೆ ಉಡುಪಿ ಜಿಲ್ಲಾ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಯಾಗಿದ್ದ ಭ್ರಷ್ಟ ಅಧಿಕಾರಿ ಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯುವ ಕಾಂಗ್ರೆಸ್ ನೀಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು
Leave a comment