ಉಡುಪಿ ರಂಗಭೂಮಿಯ ಚಿತ್ರ ನಟ, ನಿರ್ದೇಶಕ, ಬರಹಗಾರ ಹರೀಶ್ ಭಟ್ಟ ನೀನಾಸಂ ಅವರ ಪತ್ನಿ ಅಮೃತಾ ಹರೀಶ್ 2025ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಉದ್ಯಮಿ ಆಗಿರವ ಅಮೃತಾ ಹರೀಶ್ ಅವರ ಸಾಮಾಜಿಕ ಕೈಂಕರ್ಯಗಳಿಗೆ ಈ ಪ್ರಶಸ್ತಿ ಬಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
ವಿಲ್ಕ್ರಿಯೇಶನ್ಸ ಕಂಪನಿಯ ಸ್ಥಾಪಕಿ ಆಗಿರುವ ಅಮೃತಾ, ಕಂಟೆಂಟ್ ಕ್ರಿಯೇಟರ್, ಬರಹಗಾರ್ತಿ ಕೂಡ ಹೌದು. “ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ” ಕುರಿತು ಪ್ರಮಾಣಿತ ತರಬೇತುದಾರರು.ಇವರು ಕರ್ನಾಟಕ ಮಾಧ್ಯಮ ಕಾರ್ಮಿಕ ಸಂಘದ ಡಿಜಿಟಲ್ ವಿಭಾಗದ ವಿಭಾಗೀಯ ಅಧ್ಯಕ್ಷರಾಗಿದ್ದಾರೆ.
ಅಮೃತಾರ “ಡ್ರಾಮಾಯಣ” ಎಂಬ ಪ್ರಸಿದ್ಧ ಹಾಸ್ಯ ನಾಟಕ ಜನಪ್ರಿಯವಾಗಿದೆ.ಕಿರುಚಿತ್ರಗಳು ಮತ್ತು ಫೀಚರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವ್ಯಕ್ತಿಯ ಹಸ್ತಾಕ್ಷರವನ್ನು ಪರಿಗಣಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪರಿಣಿತಿ ಹೊಂದಿದ್ದು, ಸುಮಾರು 2000 ಪ್ರಕರಣವನ್ನು ಪರಿಹರಿಸಿದ್ದಾರೆ. ಪೋಲಿಸರೊಂದಿಗೆ ಕೈಜೋಡಿಸಿ “ಸುರಕ್ಷಾ ಆಪ್” ಜಾಗೃತಾ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ
.ಮಹಿಳಾ ಉದ್ಯಮಿಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ.ಅನೇಕ ವರ್ಷದಿಂದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ.
ಇವರಿಗೆ ಗೋಲ್ಡನ್ ಸ್ಟಾರ್ ವುಮನ್ ಅವಾರ್ಡ್, ಮಹಿಳಾ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕಪ್ರಶಸ್ತಿ ಪುರಸ್ಕಾರಗಳು ಸಂದಿದೆ.