thekarnatakatoday.com
Karavali Karnataka

ಖ್ಯಾತ ಉದ್ಯಮಿ  ಶ್ರೀಮತಿ ಅಮೃತಾ ಹರೀಶ್ ಭಟ್ ರಿಗೆಒಲಿದ 2025 ನೇ ಸಾಲಿನ ಪ್ರತಿಷ್ಠಿತ ಆರ್ಯಭಟ  ಅಂತರಾಷ್ಟ್ರೀಯ ಪ್ರಶಸ್ತಿ

ಉಡುಪಿ ರಂಗಭೂಮಿಯ ಚಿತ್ರ ನಟ, ನಿರ್ದೇಶಕ, ಬರಹಗಾರ ಹರೀಶ್ ಭಟ್ಟ ನೀನಾಸಂ ಅವರ ಪತ್ನಿ ಅಮೃತಾ ಹರೀಶ್ 2025ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಉದ್ಯಮಿ‌ ಆಗಿರವ ಅಮೃತಾ ಹರೀಶ್ ಅವರ ಸಾಮಾಜಿಕ ಕೈಂಕರ್ಯಗಳಿಗೆ ಈ‌ ಪ್ರಶಸ್ತಿ ಬಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ‌ ಸ್ವೀಕರಿಸಿದರು.

ವಿಲ್‌ಕ್ರಿಯೇಶನ್ಸ ಕಂಪನಿಯ ಸ್ಥಾಪಕಿ ಆಗಿರುವ ಅಮೃತಾ, ಕಂಟೆಂಟ್ ಕ್ರಿಯೇಟರ್, ಬರಹಗಾರ್ತಿ ಕೂಡ ಹೌದು. “ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ” ಕುರಿತು ಪ್ರಮಾಣಿತ ತರಬೇತುದಾರರು.ಇವರು ಕರ್ನಾಟಕ ಮಾಧ್ಯಮ ಕಾರ್ಮಿಕ ಸಂಘದ ಡಿಜಿಟಲ್ ವಿಭಾಗದ ವಿಭಾಗೀಯ ಅಧ್ಯಕ್ಷರಾಗಿದ್ದಾರೆ.

ಅಮೃತಾರ “ಡ್ರಾಮಾಯಣ” ಎಂಬ ಪ್ರಸಿದ್ಧ ಹಾಸ್ಯ ನಾಟಕ ಜನಪ್ರಿಯವಾಗಿದೆ.ಕಿರುಚಿತ್ರಗಳು ಮತ್ತು ಫೀಚರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವ್ಯಕ್ತಿಯ ಹಸ್ತಾಕ್ಷರವನ್ನು ಪರಿಗಣಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪರಿಣಿತಿ ಹೊಂದಿದ್ದು, ಸುಮಾರು 2000 ಪ್ರಕರಣವನ್ನು ಪರಿಹರಿಸಿದ್ದಾರೆ. ಪೋಲಿಸರೊಂದಿಗೆ ಕೈಜೋಡಿಸಿ “ಸುರಕ್ಷಾ ಆಪ್” ಜಾಗೃತಾ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ

.ಮಹಿಳಾ ಉದ್ಯಮಿಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ.ಅನೇಕ ವರ್ಷದಿಂದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ.

ಇವರಿಗೆ‌ ಗೋಲ್ಡನ್ ಸ್ಟಾರ್ ವುಮನ್ ಅವಾರ್ಡ್, ಮಹಿಳಾ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕ‌ಪ್ರಶಸ್ತಿ ಪುರಸ್ಕಾರಗಳು ಸಂದಿದೆ.

Related posts

ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಪು ಗಲಾಟೆ ಭಯದ ವಾತಾವರಣ ನಿರ್ಮಾಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

The Karnataka Today

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಸ್ವಸಹಾಯ ಸಂಘದ ಸಿಬ್ಬಂದಿಗಳಿಂದ ಸಾಲ ಮರುಪಾವತಿಗಾಗಿ ಕಿರುಕುಳ ಯುವತಿ ಆತ್ಮಹತ್ಯೆಗೆ ಯತ್ನ ಸಂಘದ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು

The Karnataka Today

ರೈಲ್ವೆ ಪರೀಕ್ಷೆಯಲ್ಲಿ ಮಾರ್ಗಸೂಚಿ ಮಂಗಳಸೂತ್ರ ತೆಗೆಯುವ ಷರತ್ತು ಸರಿಯಲ್ಲ :: ನವೀನ್ ಸಾಲ್ಯಾನ್ ಆಕ್ರೋಶ

The Karnataka Today

Leave a Comment