thekarnatakatoday.com
News

ದೇವಾನಾಂ ಪ್ರಿಯದರ್ಶಿ ಟ್ರಸ್ಟ್ ಹೆಸರಿನಲ್ಲಿ ಎಐಟಿಯುಸಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ 18000 ಅಂಗನವಾಡಿ ಕಾರ್ಯಕರ್ತೆಯರಿಗೆ 5 ಕೋಟಿಗೂ ಅಧಿಕ ವಂಚನೆ

18 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಪಂಗನಾಮ! ಟ್ರಸ್ಟ್ ಹೆಸರಲ್ಲಿ 5 ಕೋಟಿ ಹಣ ಎಐಟಿಯುಸಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ಹಾಗೂ ಶ್ರೀಧರ್ ಟ್ರಸ್ಟ್ ಹೆಸರಿನಲ್ಲಿ 18 ಸಾವಿರ ಅಂಗನವಾಡಿ  ಕಾರ್ಯಕರ್ತೆಯರಿಗೆ  ಪಂಗನಾಮ

ದೇವಾನಾಂ ಪ್ರಿಯದರ್ಶಿ ಈ ಟ್ರಸ್ಟ್ ನ ಆಮಿಷಗಳನ್ನು ನಂಬಿ ರಾಜ್ಯಾದ್ಯಂತ ಹಣ ಪಾವತಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಹಣ ಪಾವತಿಸಿದ ಬಳಿಕ ಯಾವುದೇ ಯೋಜನೆಯ ಹಣವನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮೋಸ ಹೋಗುವವರು ಇರುವ ತನಕ ಮೋಸ ಮಾಡೋರು ಇದ್ದೆ ಇರುತ್ತಾರೆ ಎನ್ನುವ ಮಾತು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ.

ಹಾವೇರಿ  ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿ ಹೆಸರಲ್ಲಿ ಮಹಿಳೆಯರಿಗೆ ವಂಚಿಸಿದ್ದಾರೆ ಎನ್ನಲಾಗ್ತಿದೆ. ಏನಿದು ಚೀಟಿಂಗ್ ಕೇಸ್? 18000ಕ್ಕೂ ಹೆಚ್ಚು ಕಾರ್ಯಕರ್ತೆಯರಿಗೆ ವಂಚನೆ ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ ನಡೆದಿದೆ.

ದೇವನಾಂ ಪ್ರಿಯದರ್ಶಿ ಟ್ರಸ್ಟ್ ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆಗಿದೆ ಎನ್ನಲಾಗ್ತಿದೆ. ಸುಮಾರು 18 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆರೋಪ ಕೇಳಿಬಂದಿದೆ

5 ಕೋಟಿಗೂ ಹೆಚ್ಚು ಹಣ ಏನಾಯ್ತು? ಸುಮಾರು 5 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚನೆ ಮಾಡಲಾಗಿದೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ. AITUC ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ಮತ್ತು ಶ್ರೀಧರ ವಿರುದ್ಧ ವಂಚನೆ ಆರೋಪವಿದೆ.

2019 -20 ರಲ್ಲಿ ದೇವನಾಂ ಪ್ರೀಯದರ್ಶಿ ಎಂಬ ಟ್ರಸ್ಟ್ ಸ್ಥಾಪಿಸಿದ್ದ ಶ್ರೀಧರ, ಬಳಿಕ ಜಯಮ್ಮ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ್ದರಂತೆ. 

ಪ್ರತೀ ತಿಂಗಳು 2500ರೂ ಕಟ್ಟುತ್ತಿದ್ರು ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ಅಂತ ಹೇಳಿ ಜನರನ್ನು ನಂಬಿಸಿ ಹಣ ವಸೂಲಿ ಮಾಡಲಾಗಿದೆ.

ಪ್ರತೀ ತಿಂಗಳು 310 ರೂ ಹಣವನ್ನು ವಸೂಲಿ ಮಾಡಲಾಗಿದೆ. ಒಂದು ಲಕ್ಷ ರೂ ನಿವೃತ್ತಿ ಸಹಾಯ ಧನ, ಮರಣ ಹೊಂದಿದವರಿಗೆ 2.5 ಲಕ್ಷ ರೂಪಾಯಿ, ನಿವೃತ್ತಿಯಾದ ಬಳಿಕ ಪ್ರತಿ ತಿಂಗಳು 5 ಸಾವಿರ ರೂಪಾಯಿ ನಿವೃತ್ತಿ ವೇತನ, ಒಂದು ವರ್ಷಗಳ ಕಾಲ ಅಂಗನವಾಡಿ ಸಹಾಯಕಿಯರಿಗೆ ಪ್ರತೀ ತಿಂಗಳು 2500 ರೂ ನಂತಹ ಆಮಿಷವೊಡ್ಡಿ ಹಣ ವಸೂಲಿ ಮಾಡಲಾಗಿದೆ.

ಬೀದಿಗೆ ಬಂದ್ರು ಅಂಗನವಾಡಿ ಕಾರ್ಯಕರ್ತೆಯರು ಈ ಟ್ರಸ್ಟ್ ನ ಆಮಿಷಗಳನ್ನು ನಂಬಿ ರಾಜ್ಯಾದ್ಯಂತ ಹಣ ಪಾವತಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಹಣ ಪಾವತಿಸಿದ ಬಳಿಕ ಯಾವುದೇ ಯೋಜನೆಯ ಹಣವನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮನೆ ನಿರ್ವಹಣೆಯ ಜತೆಗೆ 310 ರೂ ಕೂಡಿಟ್ಟು ಟ್ರಸ್ಟ್ ಗೆ ಹಣ ಪಾವತಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸದ್ಯ ದೇವನಾಂ ಪ್ರೀಯದರ್ಶಿ ಟ್ರಸ್ಟ್ ನಂಬಿ ಬೀದಿಗೆ ಬಂದಿದ್ದಾರೆ.

Related posts

ಕಾರ್ಮಿಕರ ಕನಿಷ್ಠ ವೇತನ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಅಧಿಸೂಚನೆ ಪ್ರಕಟ

The Karnataka Today

ರಾಜ್ಯದಲ್ಲಿ ಇನ್ನೂ 3 ದಿನ ಮಳೆ: ಕರಾವಳಿಯಲ್ಲಿ ಭಾರಿ ಮಳೆ ರೆಡ್ ಅಲರ್ಟ್ ಘೋಷಣೆ

The Karnataka Today

ಕಾಶ್ಮೀರ ಉಗ್ರರ ದಾಳಿ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಬೇಕು ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಜೊತೆ ನಾವಿದ್ದೇವೆ ಡಿಸಿಎಂ ಡಿಕೆ ಶಿವಕುಮಾರ್

The Karnataka Today

Leave a Comment