“ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ, ಆದರೆ, ದೇಶದ್ರೋಹಿಗಳ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಹೇಳಿದರು.
ಪಕ್ಷದ ಜಿಲ್ಲಾ ಘಟಕ ಆಯೋಜಿಸಿದ್ದ ಜನಕ್ರೋಶ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, 2025ರ ರಾಜ್ಯ ಬಜೆಟ್ ಮಂಡಿಸಿದ ದಿನದಂದು ಮುಸ್ಲಿಂ ತುಷ್ಟೀಕರಣ ನೀತಿಯನ್ನು ಅಂಗೀಕರಿಸಲಾಗಿದೆ.
ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಆದರೆ, ದೇಶದ್ರೋಹಿಗಳ ವಿರೋಧಿ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಜನರನ್ನು ರಾಜ್ಯ ಸರ್ಕಾರ ಗೌರವಿಸಿತು, ಸ್ವರಕ್ಷಣೆಗಾಗಿ ಸರ್ಕಾರವು ಮುಸ್ಲಿಂ ಮಹಿಳೆಯರಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.
ಆದರೆ, ಮುಸ್ಲಿಂ ಮಹಿಳೆಯರಿಗಿಂತ ಹಿಂದೂ ಮಹಿಳೆಯರಿಗೆ ಆತ್ಮರಕ್ಷಣೆಯ ಹೆಚ್ಚಿನ ಅಗತ್ಯವಿದೆ ಎಂದು ಹೇಳಿದರು. ಪ್ರತಿ ಮುಸ್ಲಿಂ ಹುಡುಗಿಯ ವಿವಾಹಕ್ಕೆ 50,000 ರೂ.ಗಳ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಲಾಗಿದೆ ಮತ್ತು ಮೌಲ್ವಿಗಳಿಗೆ ಹೆಚ್ಚಿನ ಸಂಭಾವನೆ ನೀಡಲಾಗುವುದು ಎಂದೂ ಭರವಸೆ ನೀಡಲಾಗಿದೆ,
ಆದರೆ ಹಿಂದೂಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಮುಸ್ಲಿಮರು ನಿಮಗೆ ಮತ ಹಾಕಿದ್ದರಿಂದ ಮಾತ್ರ ನೀವು ಮುಖ್ಯಮಂತ್ರಿಯಾದಿರಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿನ ಭ್ರಷ್ಟಾಚಾರದ ವಿಚಾರ ಪ್ರಸ್ತಾಪಿಸಿದ ಅವರು,, ವಾಲ್ಮೀಕಿ ನಿಗಮ ಮಂಡಳಿಯ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಲಾಗಿದ್ದು, ಅಲ್ಲಿ ಹಣವನ್ನು ಚುನಾವಣೆಗೆ ಬಳಸಲಾಯಿತು. ಸಾವಿರಾರು ಖಾತೆಗಳನ್ನು ರಚಿಸಿ, ಹಣವನ್ನು ವರ್ಗಾಯಿಸಲಾಗಿದೆ.
ಹಣವು ರಾಜ್ಯದಿಂದ ಹೊರಹೋಗಿದೆ. ಸಚಿವರ ಪಾತ್ರವಿಲ್ಲದೆ ಇದು ಸಾಧ್ಯವಿಲ್ಲ. ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿಎಂ ಬೆಂಬಲವಿಲ್ಲದೆ ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದರು
. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯವು ಅಭಿವೃದ್ಧಿಯಲ್ಲಿ ಗುಜರಾತ್ ನಂತರದಲ್ಲಿತ್ತು, ಈಗ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಆಗಿದೆ. ಇದನ್ನು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರೇ ಹೇಳಿದ್ದಾರೆಂದು ವ್ಯಂಗ್ಯವಾಡಿದರು.