ಹಲ್ಲೆ ಆರೋಪಿಗಳಿಂದ ಜೀವ ಬೆದರಿಕೆ ರಕ್ಷಣೆಗಾಗಿಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋದ ಮಲ್ಪೆ ದಂಪತಿಗಳು

40

ಮಲ್ಪೆ ಆರೋಪಿ ಸಾಗರ್ ಮತ್ತು ಚರಣ್ ರಾಜ್ ಮತ್ತಿತರ ದಾಳಿಯಿಂದ ಕಂಗೆಟ್ಟ ಶೇಖರ್ ತಿಂಗಳಾಯ ದಂಪತಿಗಳು ಇಂದು ಪೊಲೀಸ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿದರು.

ಮಲ್ಪೆ ಪರಿಸರದ ರೌಡಿ ಸಾಗರ್ ಹಾಗೂ ಚರಣರಾಜ್ ಮತ್ತು ಇತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ತಮಗೆ ಜೀವ ರಕ್ಷಣೆ ನೀಡುವಂತೆ ಹಾಗೂ  ಆರೋಪಿತರ ವಿರುದ್ಧ ರೌಡಿಶೀಟರ್ ಹಾಳೆ ತೆರೆದು ಸೂಕ್ತ ಕ್ರಮ ಕೈಗೊಳ್ಳುವಂತೆ  ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಮಾಡಿದರು

ನಮ್ಮ ಮನೆಗೆ.ಅತಿಕ್ರಮ ಪ್ರವೇಶ ಮಾಡಿ ನನ್ನ ಗಂಡನಿಗೆ ಮತ್ತು ನನಗೆ ಹಲ್ಲೆ ಮಾಡಿದ ಬಗ್ಗೆ ಮಲ್ಪೆ ಪೋಲಿಸ್ 10/20250 (BNS),2023 (U/s -189(2), 191(2),115(2), 126(2) 329(3),352,351(2),74,190)  ಆರೋಪಿಗಳು, ಮಾನ್ಯ ನ್ಯಾಯಾಲಯದಲ್ಲಿ ಜಾಮೀನನ್ನು ಪಡೆದುಕೊಂಡು, ನಂತರ ನನ್ನ ಗಂಡನನ್ನು ಹುಡುಕಿಕೊಂಡು ಬಂದು 22-01-2025రెందు ನಮ್ಮ ವಿಲ್ಲಾ ಗೆ ‘ರಾತ್ರಿ 11.10 € ಹಿಂಬಾಗದಲ್ಲಿ ಸಾಗರ್ ಮೆಂಡನ್ ಮತ್ತು ಇತರರು ಬಂದು ಅತಿಕ್ರಮ ಪ್ರವೇಶ ಮಾಡಿ ‘ಎಲ್ಲ’ಗೆ ಅಳವಡಿಸಿದ ನೀರಿನ ಟ್ಯಾಪನ್ನು ಮುರಿದು ನಷ್ಟವನ್ನು ಉಂಟುಮಾಡಿರುತ್ತಾರೆ,

ಆ ಬಗ್ಗೆ ಮಲ್ಪೆ ಪೋಲಿಸ್ 12/2025 5 (BNS),2023 (U/s-329(3), 324(4),3(5) ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸಾಗರ್ ಮೆಂಡನ್ ಈತ ಒಬ್ಬ ರೌಡಿ ಪ್ರವೃತ್ತಿಯುಳ್ಳವನಾಗಿದ್ದು, ಇವನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನ ರೌಡಿ ಸ್ವಭಾವವನ್ನು ನೋಡಿದಾಗ ಮುಂದಿನ ದಿವಸದಲ್ಲಿ ನನ್ನ ಗಂಡನಿಗೆ ಹಲ್ಲೆ ಮಾಡುವ ಸಂಭವವಿರುತ್ತದೆ.

ನನ್ನ ಗಂಡನಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದು ಈ ರೌಡಿ ಸ್ವಭಾವದ ಸಾಗರ್ ಮತ್ತು ಇತರ ಆರೋಪಿಗಳನ್ನು ಸೇರಿಕೊಂಡು ಮುಂದಿನ ದಿವಸದಲ್ಲಿ ನನ್ನ ಗಂಡನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಸಂಭವವಿರುತ್ತದೆ.

ಮಾನ್ಯ ನ್ಯಾಯಾಲಯದಲ್ಲಿ ಜಾಮೀನನ್ನು ಪಡೆದು ಆ ದಿನವೇ ಬಂದು ಪುನಃ ಹಲ್ಲೆ ಮಾಡುವ ಉದ್ದೇಶದಿಂದ ಆತ ನಮ್ಮ ವಿಲ್ಲಗೆ ಅತಿಕ್ರಮ ಪ್ರವೇಶ ಮಾಡಿರುವುದನ್ನು ನೋಡಿದರೆ ಸಾಗರ್ ಮತ್ತು ಇತರ ಆರೋಪಿಗಳಿಗೆ ಪೋಲಿಸರ ಮತ್ತು ಕಾನೂನಿನ ಯಾವುದೇ ಭಯವಿಲ್ಲ ಎಂದು ಕಂಡುಬರುತ್ತದೆ.

ಮಾನ್ಯ ನ್ಯಾಯಾಲಯ ಸಾಗರ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ಸಂದರ್ಭದಲ್ಲಿ ಮಾಡಿದೆ ಆದೇಶವನ್ನು ಆರೋಪಿಗಳು ಉಲ್ಲಂಘನೆ ಮಾಡಿರುತ್ತಾರೆ.

ಆರೋಪಿಗಳಿಗೆ ಮಾನ್ಯ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ರದ್ದು ಗೊಳಿಸುವ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿ ಮತ್ತು ನನ್ನ ಗಂಡ ಮಲ್ಪೆ ಬಂದರಿನಲ್ಲಿ ಮೀನಿನ ವ್ಯವಹಾರ ಮಾಡುವ ಸಂದರ್ಭದಲ್ಲಿ

ಸಾಗರ್ ಮೆಂಡನ್ ಮತ್ತು ಚರಣ್ ರಾಜ್ ಮತ್ತು ಇತರ ಆರೋಪಿಗಳು ಹಲ್ಲೆ ಮಾಡುವ ಸಂಭವವಿರುವುದರಿಂದ ನನ್ನ ಗಂಡನಿಗೆ ರಕ್ಷಣೆಯನ್ನು ನೀಡುವ ಬಗ್ಗೆ ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅವರನ್ನು ಮನವಿ ಮಾಡಿಕೊಂಡಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...