ಪೇಜಾವರ ಸ್ವಾಮೀಜಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ವಿಡಿಯೋ ವೈರಲ್ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹರೀಶ್ ಕುಮಾರ್ ಎನ್ನುವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ಒಂದು ವಿಡಿಯೋ ಬಂದಿರುತ್ತದೆ. ಈ ವಿಡಿಯೋದಲ್ಲಿ ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಎಂಬಾತ ಎ ವನ್ ನ್ಯೂಸ್ ಚಾನಲಿನಲ್ಲಿ ನಮ್ಮ ಉಡುಪಿ ಕೃಷ್ಣ ಮಠದ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿರುತ್ತಾನೆ.
ಈತ ಮಾತನಾಡುತ್ತಾ ಪೇಜಾವರ ಪ್ರಸನ್ನ ಸ್ವಾಮಿ ಅನ್ನುವವನೊಬ್ಬ ಗಾಂಡು ನನ್ನ ಮಗ ನಾಮರ್ಧ ನನ್ನ ಮಗ.. ಪೇಜಾವರ ಸ್ವಾಮಿಗೆ ಡೈರೆಕ್ಸ್ ಹೇಳುತ್ತೇನೆ.
ಇಷ್ಟಕ್ಕೆ ಸುಮ್ಮನೆ ಕೂತರೆ ಸರಿ ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ ಕೋರೆಗಂವ್ ಯುದ್ಧ ಅಲ್ಲೇ ಉಡುಪಿ ಮಠದ ಮುಂದೆ ಆಗುತ್ತೆ.
ಒಂದಲ್ಲ ಒಂದು ಸಲ ಯುದ್ಧ ಆಗುತ್ತದೆ. ಮಗನೇ ನಿನ್ನ ಜೊತೆ ಎಷ್ಟು ಹಿಂದುಗಳು ಇದ್ದಾರಲ್ವಾ? ಅವರನ್ನೆಲ್ಲ ಕರೆಸಿಕೊಂಡು ನಮಗೆ ಕರೆ ಕೊಡು ನಾವು ದಲಿತರ ತಾಕತ್ತು ಏನು ಅಂತ ತೋರಿಸುತ್ತೇವೆ ನನ್ನ ಮಗನೇ ಎಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರವನ್ನು ಪ್ರಚೋದಿಸಿ ಮತ್ತು ಪೇಜಾವರ ಶ್ರೀಗಳಿಗೆ ಜೀವ ಬೆದರಿಕೆಯನ್ನು ಒಡ್ಡಿರುತ್ತಾನೆ.
ಹಿಂದೂ ಸಮಾಜದ ಪ್ರಮುಖ ಗುರುಗಳಾಗಿರುವ ಪೇಜಾವರ ಶ್ರೀಗಳನ್ನು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ನಮ್ಮ ಧರ್ಮದ ನಿಂದನೆಯನ್ನು ಮಾಡಿರುತ್ತಾನೆ.
ಆರೋಪಿ ಅವಾಚ್ಯವಾಗಿ ಮಾತನಾಡಿರುವ ಆಡಿಯೋ ಸಿಡಿ ಕೂಡ ಲಗತ್ತಿಸಲಾಗಿದೆ ತಾವು ಈ ಕೂಡಲೇ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸ ಬೇಕೆಂದು ಹರೀಶ್ ಕುಮಾರ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ