ಚಿನ್ಮಯಿ ಕ್ರಷ್ಣ ದಾಸ್ ಬಂಧನ ಖಂಡಿಸಿ ಪ್ರತಿಭಟನೆ ವಿಚಾರ ಭಾರತೀಯ ಹೈ ಕಮಿಷನರ್ ಗೆ ಸಮನ್ಸ್ ಜಾರಿಗೊಳಿಸಿದ ಬಾಂಗ್ಲಾದೇಶ

41

“ತ್ರಿಪುರಾ ರಾಜಧಾನಿ ಅಗರ್ತಲಾದ ತನ್ನ ಅಸಿಸ್ಟೆಂಟ್ ಹೈ ಕಮಿಷನ್‌ ಕಚೇರಿ ಮೇಲಿನ ದಾಳಿಗೆ ಸೋಮವಾರ ತೀವ್ರ ಪ್ರತಿಭಟನೆ ದಾಖಲಿಸಿದ್ದ ಬಾಂಗ್ಲಾದೇಶ ಮಂಗಳವಾರ ಈ ಸಂಬಂಧ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಸಮನ್ಸ್‌ ನೀಡಿದೆ.

“ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸಲು ಅವರಿಗೆ(ವರ್ಮಾ) ವಿದೇಶಾಂಗ ಸಚಿವಾಲಯಕ್ಕೆ ಬರುವಂತೆ ತಿಳಿಸಲಾಗಿತ್ತು”

ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಅಗರ್ತಲಾ ಘಟನೆಯ ನಂತರ ಭಾರತೀಯ ರಾಯಭಾರಿಯನ್ನು ವಿದೇಶಾಂಗ ಕಚೇರಿಗೆ ಬರುವಂತೆ ತಿಳಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಈ ಹಿಂದೆ ಹೇಳಿದ್ದರು.

ಮತ್ತೊಂದೆಡೆ, ಭಾರತ, ಬಾಂಗ್ಲಾದೇಶದೊಂದಿಗೆ “ಸ್ಥಿರವಾದ, ರಚನಾತ್ಮಕ ಸಂಬಂಧ” ಹೊಂದಲು ಬಯಸುತ್ತದೆ. ಯಾವುದೇ ಒಂದು ಸಮಸ್ಯೆಯು ದ್ವಿಪಕ್ಷೀಯ ಸಂಬಂಧಗಳಿಗೆ ಅಡ್ಡಿಯಾಗಬಾರದು ಎಂದು ವರ್ಮಾ ತಿಳಿಸಿದ್ದಾರೆ.

ನಾವು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ” ಎಂದು ಅವರು ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ಅವರೊಂದಿಗಿನ ಸಭೆಯಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಬಾಂಗ್ಲಾದೇಶ ಗಡಿಯಲ್ಲಿರುವ ಈಶಾನ್ಯ ರಾಜ್ಯ ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣದಾಸ್ ಅವರ ಬಂಧನವನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿತ್ತು.

ಈ ವೇಳೆ ಜನರ ಗುಂಪೊಂದು ಅಸಿಸ್ಟೆಂಟ್ ಹೈ ಕಮಿಷನ್‌ ಕಚೇರಿ ಆವರಣಕ್ಕೆ ನುಗ್ಗಿ ಗೇಟ್, ಧ್ವಜಸ್ತಂಭ ಹಾಳು ಮಾಡಿತ್ತು. ಈ ಘಟನೆಗೆ ಭಾರತ ಸೋಮವಾರ “ತೀವ್ರ ವಿಷಾದ” ವ್ಯಕ್ತಪಡಿಸಿತ್ತು.

ಪ್ರತಿಭಟನಾಕಾರರು ಬಾಂಗ್ಲಾದೇಶದ ಸಹಾಯಕ ಹೈಕಮಿಷನ್‌ಗೆ ನುಗ್ಗಿ ವಿಧ್ವಂಸಕ ಕೃತ್ಯವೆಸಗಿದ್ದಾರೆ ಎಂದು ವರದಿಯಾದ ಗಂಟೆಗಳ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ವಿಷಾದ ವ್ಯಕ್ತಪಡಿಸಿತ್ತು.

Leave a comment

Leave a Reply

Your email address will not be published. Required fields are marked *

Related Articles

ಜೆರುಸಲೇಂ ಅಲ್-ಅಕ್ಸಾ ಮಸೀದಿ  ಮೇಲೆ ಇರಾನ್ ಕ್ಷಿಪಣಿ ದಾಳಿ

ಈದ್ ಅಲ್-ಫಿತರ್‌ ದಿನವೇ ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್-ಅಕ್ಸಾ ಮಸೀದಿಯಿಂದ ಕೇವಲ...

ಇಂಧನ ಮೂಲಸೌಕರ್ಯದ ಮೇಲೆ ದಾಳಿಗೆ ಇರಾನ್ ತೀವ್ರ ಆಕ್ರೋಶ ಅನಿಯಂತ್ರಿತ ಪ್ರತಿದಾಳಿ” ಇರಾನ್ ಸ್ಪಷ್ಟ ಎಚ್ಚರಿಕೆ

“ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ...

ಹಾರ್ಮುಜ್ ಜಲಸಂಧಿಯ ಬಳಿ ಸಮುದ್ರ ಸಂಚಾರಕ್ಕೆ ಅಡ್ಡಿ ಭಾರತೀಯ ಯುದ್ಧನೌಕೆ    ಭದ್ರತೆಯಲ್ಲಿ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್ ಪಿಜಿ ಟ್ಯಾಂಕರ್

ನವದೆಹಲಿ: ಇರಾನ್ ಸಂಘರ್ಷದ ನಡುವೆಯೇ ಶನಿವಾರವೂ ಕೂಡ ಭಾರತ ಮೂಲದ  ಎಲ್ ಪಿಜಿ  ಟ್ಯಾಂಕರ್ ವೊಂದು...

ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ ನೆರೆ ರಾಷ್ಟ್ರ ಗಳ ಕ್ಷಮೆ ಕೇಳಿದ ಇರಾನ್

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್ ಹಾಗೂ ಮಧ್ಯಪ್ರಾಚ್ಯದ...