thekarnatakatoday.com
National

21 ವರ್ಷಗಳಲ್ಲಿ ಕಾರ್ಕಳದಲ್ಲಿ ನಕ್ಸಲ್  ವಿಕ್ರಂ ಗೌಡ ಸೇರಿದಂತೆ ಮೂವರು ನಕ್ಸಲ್ ರ ಎನ್ ಕೌಂಟರ್

” ಕಸ್ತೂರಿ ರಂಗನ್ ವರದಿಗಾರ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಕರಾವಳಿಯ ಅರಣ್ಯ ಭಾಗದಲ್ಲಿ ವಾಸಿಸುತ್ತಿರುವ ಜನರ ಬೆಂಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ನಕ್ಸಲ್  ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಈ ಭಾಗಗಳಲ್ಲಿ ಮತ್ತೆ ತಿರುಗಾಟ ಪ್ರಾರಂಭ ಮಾಡಿದ್ದು ಅರಣ್ಯ ಭೂಮಿಗಳ ಗಡಿಭಾಗದಲ್ಲಿದ್ದ ಜನರನ್ನ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೇಳು ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು 

  ನಿನ್ನೆ ದಿನ ಆಹಾರ ಸಂಗ್ರಹಣೆಗಾಗಿ ಹೆಬ್ರಿ ಭಾಗದ  ಕಬ್ಬಿನಾಲೆ ಪರಿಸರಕ್ಕೆ ವಿಕ್ರಂ  ಗೌಡ ನೇತೃತ್ವದ ತಂಡ  ಬಂದಿರುವ ಮಾಹಿತಿ ಪಡೆದ ಎ ಎನ್ ಎಫ್  ಕಾರ್ಕಳ, ಹೆಬ್ರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕೂಂಬಿಂಗ್ ತೀವ್ರಗೊಳಿಸಿದ್ದ ಪರಿಣಾಮ  ಎಎನ್ಎಫ್ ನಿಂದ ನಕ್ಸಲ್ ನಾಯಕ ವಿಕ್ರಂ ಗೌಡ ಸೇರಿದಂತೆ ಇ ತನಕ ಮೂಡಿಗೆರೆ  ವನಜಾಕ್ಷಿ ಅಲಿಯಾಸ್ ಜ್ಯೋತಿ , ಸುಂದರಿ ಆಲಿಯಾಸ್ ಮೂವಿ ಗೀತಾ ಕುತ್ತೂರು  ಮೂವರ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ಹೆಬ್ರಿ ಪರಿಸರ ಕಬ್ಬಿನಾಲೆ, ಪೀತೆಬೈಲು ಪರಿಸರದಲ್ಲಿ ನಾಲ್ವರು ನಕ್ಸಲರು ಓಡಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎಎನ್ ಎಫ್ ಕಾರ್ಯಾಚರಣೆ ನಡೆಸಿದ್ದು, ಈ‌ ನಡುವೆ ಎಎನ್ ಎಫ್, ನಕ್ಸಲರ‌ ನಡುವೆ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಗುಂಡು ತಗುಲಿಮ ಮೃತಪಟ್ಟಿದ್ದು, ಉಳಿದವರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ.

ಕಾರ್ಕಳ, ಹೆಬ್ರಿ ಸಹಿತ ವಿವಿಧ ಪಶ್ಚಿಮಘಟ್ಟ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.”

Related posts

ಜ್ಞಾನ ವ್ಯಾಪಿಮಂದಿರ ಪರ ಕೋರ್ಟ್ ಆದೇಶ ಪ್ರಕಾರ ಶಾಹಿ ಜಾಮಾ ಮಸೀದಿ ಸಮೀಕ್ಷೆ ಸಂಧರ್ಭ ಹಿಂಸಾಚಾರ ಪೊಲೀಸ್ ಗುಂಡಿಗೆ ಮೂವರು ಬಲಿ

The Karnataka Today

ದೆಹಲಿ ಮಹಿಳಾ ಸಮ್ಮಾನ್ ಯೋಜನೆ ವಿವಾದ ಆಮ್ ಆದ್ಮಿ ಹಾಗೂ ಲೆಫ್ಟಿಂನೆಂಟ್ ಗವರ್ನರ್ ಜಟಾಪಟಿ ತನಿಖೆಗೆ ಆದೇಶ

The Karnataka Today

ಭೂ ಅವ್ಯವಹಾರ ಪ್ರಕರಣ ತನಿಖೆಗೆ ಇ ಡಿ ಮುಂದೆ ಹಾಜರಾದ ರಾಬರ್ಟ್ ವಾದ್ರಾ

The Karnataka Today

Leave a Comment