“ಪಂಜಾಬ್ನ ಜಲಂಧರ್ ಹಾಗೂ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಸತತ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಗುಜರಾತ್ನ ಕಚ್ ಜಿಲ್ಲೆಯ ಕರಾವಳಿಯ ತೊರೆ ಪ್ರದೇಶದಲ್ಲಿ ಬುಧವಾರ ಯಾರೂ ಇಲ್ಲದ ಶಂಕಿತ ಪಾಕಿಸ್ತಾನಿ ದೋಣಿಯೊಂದು ಪತ್ತೆಯಾಗಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ
.
ಆರಂಭಿಕ ಶೋಧದ ಸಮಯದಲ್ಲಿ ದೋಣಿಯಲ್ಲಿ ಮೀನುಗಾರಿಕೆ ಉಪಕರಣಗಳು ಮಾತ್ರ ಕಂಡುಬಂದಿವೆ ಮತ್ತು ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಸಮುದ್ರ ಗಡಿಯ ಬಳಿ ಯಾರೂ ಇಲ್ಲದ ಖಾಲಿ ದೋಣಿಯೊಂದನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್) ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ವಾರಸುದಾರರು ಇಲ್ಲದ ದೋಣಿಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. 
ಭಾರತೀಯ ಮೀನುಗಾರರು ಅರೇಬಿಯನ್ ಸಮುದ್ರದ ತೊರೆ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದ್ದರೂ, ಪಾಕಿಸ್ತಾನಿ ಮೀನುಗಾರರು ಅಕ್ರಮವಾಗಿ ಮೀನು ಹಿಡಿಯಲು ಭಾರತದ ಕಡೆಗೆ ಪ್ರವೇಶಿಸುತ್ತಾರೆ.
Leave a comment