ಬಳಕೆಯಾಗದೆ ಉಳಿದ ಮೊಬೈಲ್ ಇಂಟರ್ನೆಟ್ ಡೇಟಾ ಮರುದಿನ ಬಳಕೆಗೆ ರೋಲ್ ಓವರ್ ಮಾಡಿ: ಟೆಲಿಕಾಂ ಕಂಪನಿಗಳಿಗೆ ರಾಘವ್ ಚಡ್ಡಾ ಆಗ್ರಹ

53

ನವದೆಹಲಿ: ಬಳಕೆಯಾಗದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಟೆಲಿಕಾಂ ಕಂಪನಿಗಳು ಅನುಮತಿ ನೀಡಬೇಕು, ಆ ರೀತಿಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸಂಸತ್ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ತಮ್ಮ ವಾದವನ್ನು ಮಂಡಿಸಿದ್ದಾರೆ. ಸಾಮಾನ್ಯವಾಗಿ ನಾವು ಇಂಟರ್ನೆಟ್ ಡೇಟಾ ಹಾಕಿಸುವ ಸಂದರ್ಭದಲ್ಲಿ 1.5GB, 2GB, 3GB ಎಂಬಂತೆ ರಿಚಾರ್ಜ್ ಮಾಡಿಕೊಳ್ಳುತ್ತೇವೆ.


ಟೆಲಿಕಾಂ ಕಂಪನಿಗಳು ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿರುತ್ತವೆ. 24 ಗಂಟೆ ಮುಗಿದ ಬಳಿಕ ಹೊಸ ಇಂಟರ್ನೆಟ್ ಡೇಟಾ ಆರಂಭವಾಗುತ್ತದೆ. ಆದರೆ ನಾವು ಕೆಲವೊಮ್ಮೆ ಒಂದು ದಿನದಲ್ಲಿ ಕಂಪ್ಲೀಟ್ ಡೇಟಾ ವನ್ನು ಬಳಸುವುದಿಲ್ಲ. ಇದೆ ಬಳಸದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಕಂಪನಿಗಳು ಹಿಂಪಡೆಯುತ್ತವೆ. ಆದರೆ ನಾವು ಅದಕ್ಕೆ ಸಂಪೂರ್ಣವಾಗಿ ಹಣವನ್ನು ಪಾವತಿಸಿರುತ್ತೇವೆ. ಹೀಗಾಗಿ ಬಳಕೆಯಾಗದೆ ಉಳಿದ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಅನುಮತಿ ನೀಡಬೇಕೆಂದು ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧ್ವನಿಯೆತ್ತಿದ್ದಾರೆ.
ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಅದನ್ನು ಮಾರನೇ ದಿನ ಬಳಸಲಾಗಲ್ಲ. ಬಳಕೆಯಾಗದ ಡೇಟಾವು ಸಂಪೂರ್ಣವಾಗಿ ಪಾವತಿಸಲ್ಪಟ್ಟಿದ್ದರೂ ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಬಳಕೆದಾರರ ಬಳಕೆಯಾಗದ ಮೊಬೈಲ್ ಡೇಟಾವನ್ನು ಟೆಲಿಕಾಂ ಕಂಪನಿಗಳು ಮಧ್ಯರಾತ್ರಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಇದನ್ನು ಮರುದಿನಕ್ಕೆ ಮುಂದುವರಿಸಲಾಗುವುದಿಲ್ಲ. ಇದು ಅನೈತಿಕ ಎಂದು ಚಡ್ಡಾ ಕಿಡಿಕಾರಿದ್ದಾರೆ.
ಅಲ್ಲದೆ ಮೊಬೈಲ್ ಡೇಟಾವನ್ನು ರೋಲ್‌ಓವರ್ ಮಾಡಲು ಅಥವಾ ಮಾರನೇ ದಿನಕ್ಕೆ ಸಾಗಿಸಲು ಯಾವುದೇ ಸೌಲಭ್ಯವಿಲ್ಲ. ನಾವು ಪಾವತಿಸಿದ ಡೇಟಾವನ್ನು ಟೆಲಿಕಾಂ ಕಂಪನಿಗಳು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬೇಕು?. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್‌ನಂತಹ ಇತರ ಗ್ರಾಹಕ ಸೇವೆಗಳೊಂದಿಗೆ ಸಮಾನಾಂತರವಾಗಿ ಡೇಟಾವನ್ನು ನೋಡಬೇಕು.
ಬಳಕೆಯಾಗದ ಡೇಟಾವನ್ನು ರೋಲ್‌ಓವರ್ ಮಾಡಲು ಇಲ್ಲ, ಕುಟುಂಬ ಮತ್ತು ಸ್ನೇಹಿತರ ನಡುವೆ ಅದನ್ನು ವರ್ಗಾವಣೆ ಮಾಡುವ ಪ್ರೀತಿಯಲ್ಲಿ ಯಾವುದಾದರು ಕ್ರಮ ತರಬೇಕು ಎಂದು ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಚೀನಾ ಪಾಕಿಸ್ತಾನ ಬಾಂಗ್ಲಾ ದೇಶದ ಗಡಿ ಪ್ರದೇಶದ ರಾಜ್ಯಗಳ ರೈಲ್ವೆ ಮೂಲಭೂತ ಸೌಲಭ್ಯ ಹೆಚ್ಚಳಕ್ಕೆ ಆದ್ಯತೆ ನೀಡಿದ ಕೇಂದ್ರ ಸರಕಾರ

“ನವದೆಹಲಿ: ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ತನ್ನ ಗಡಿಗಳಲ್ಲಿ ರೈಲ್ವೆ ಮೂಲಸೌಕರ್ಯವನ್ನು ನವೀಕರಿಸಲು ಭಾರತ 45,000...

ಮೋದಿ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಬಿಜೆಪಿ ನಾಯಕರೂ ಪ್ರಧಾನಿ ಹೇಳಿದಂತೆ ವಿಪಕ್ಷೀಯರ ಮೇಲೆ ಅಶ್ಲೀಲ ಪದ ಬಳಕೆ ನಿಲ್ಲಿಸಲಿ; ರಾಜ್ ಠಾಕ್ರೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಸದಸ್ಯರಿಗೆ ತಮ್ಮ ವಿರೋಧಿಗಳ ವಿರುದ್ಧ ಕೀಳು ಭಾಷೆ ಬಳಸದಂತೆ...

ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಕೇಂದ್ರ ಜಲಶಕ್ತಿ ಸಚಿವಾಲಯ

ಬೆಂಗಳೂರು: ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ...

ಕಾಕ್ರೋಚ್ ಜನತಾ ಪಕ್ಷಕ್ಕೆ 1 ಕೋಟಿ ದೇಣಿಗೆ ನೀಡಿ ಕಾನೂನು ನೆರವು ಉಚಿತ ಎಂದ ಕಪಿಲ್ ಸಿಬಲ್

“ನವದೆಹಲಿ: ನೀಟ್ ಅಕ್ರಮ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಕಾನೂನು ಬೆಂಬಲ ನೀಡುತ್ತೇನೆ ಮತ್ತು...