ಪಾಕಿಸ್ತಾನಕ್ಕೆ ಚೀನಾದಿಂದ ಪೂರೈಕೆಯಾಗುತ್ತಿದೆಯಂತೆ J-10C ಯುದ್ಧ ವಿಮಾನಗಳು ಪೆಂಟಾಗಾನ್‌ ಶಾಕಿಂಗ್‌ ವರದಿ

22

ವಾಷಿಂಗ್ಟನ್ : ಪಾಕಿಸ್ತಾನಕ್ಕೆ ಚೀನಾದಿಂದ ಪೂರೈಕೆಯಾಗುತ್ತಿದೆಯಂತೆ J-10C ಯುದ್ಧ ವಿಮಾನಗಳು ಪೆಂಟಾಗಾನ್‌ ಶಾಕಿಂಗ್‌ ವರದಿ ಭಾರತದ ರಾಫೇಲ್ ಯುದ್ಧ ವಿಮಾನಗಳ ಸಂಖ್ಯೆಗೆ ಸಮನಾಗುವಷ್ಟು ಯುದ್ದವಿಮಾನ ನೀಡಿ ಯುದ್ದಕ್ಕೆ ಸಜ್ಜುಗೊಳಿಸುತ್ತಿದೆಯಂತೆ ಡ್ರ್ಯಾಗನ್‌ ಪಹಲ್ಗಾಮ್‌ ದಾಳಿಗೂ ಕೆಲದಿನಗಳ ಮುನ್ನವೇ PL-17 ಏರ್-ಟು-ಏರ್ ಕ್ಷಿಪಣಿ ಪಾಕಿಸ್ತಾನಕ್ಕೆ ರವಾನಿಸಿದ್ದ ಚೀನಾ ಚೀನಾದ ಯುದ್ದ ವಿಮಾನಗಳು

ಅಮೆರಿಕಾದ ಪೆಂಟಾಗಾನ್‌ ವರದಿ ಬಿಡುಗಡೆಯಾಗಿದ್ದು, ಹಲವು ಶಾಕಿಂಗ್‌ ವಿಷಯಗಳು ಬೆಳಕಿಗೆ ಬಂದಿದ್ದು, ಭಾರತ ಹಾಗೂ ಚೀನಾದ ನಡುವಿನ ಸಂಬಂಧ ಈಗ ತಾನೇ ಸರಿಯಾಗುತ್ತಿದೆ ಎಂಬ ಹೊತ್ತಿನಲ್ಲೇ ಪೆಂಟಾಗಾನ್‌ ವರದಿ ಚೀನಾ ಪಾಕಿಗಳಿಗೆ ನೀಡುತ್ತಿರುವ ಬೆಂಬಲವನ್ನು ಎತ್ತಿ ತೋರಿಸಿದೆ. ಪೆಂಟಾಗಾನ್‌ ವರದಿಯಲ್ಲಿ ಚೀನಾ ತನ್ನ ಆಪ್ತ ಮಿತ್ರ ಪಾಕಿಸ್ತಾನಕ್ಕೆ 36 J-10C ಯುದ್ಧ ವಿಮಾನಗಳು ಮತ್ತು ನಾಲ್ಕು ಯುದ್ಧನೌಕೆಗಳನ್ನು ನೀಡುತ್ತಿದೆ ಎಂದು ತಿಳಿಸಿದೆ.

ಅಲ್ಲದೆ, ಇದರೆಲ್ಲೇನೂ ಆಘಾತಕಾರಿ ವಿಚಾರ ಎಂದರೆ ಭಾರತದ ಮೇಲೆ ಯಾವಾಗಲೂ ಯುದ್ದಕ್ಕೆ ಕಾಲುಕೆರೆದು ನಿಲ್ಲುವ ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಈ ಯುದ್ದ ವಿಮಾನಗಳು ಭಾರತದಲ್ಲಿರುವ ರಫೇಲ್ ಯುದ್ಧವಿಮಾನಗಳ ಸಾಮರ್ಥ್ಯಕ್ಕೆ ಸರಿಸಮಾನವಾಗಿದ್ದು, ಪಾಕಿಸ್ತಾನವನ್ನು ಯುದ್ದಕ್ಕೆ ಚೀನಾ ಸಿದ್ದಪಡಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿರುವುದು.

ಅಮೆರಿಕಾದ ರಕ್ಷಣಾ ಇಲಾಖೆ ಪೆಂಟಗಾನ್‌ ಕಾಂಗ್ರೆಸ್‌ ಗೆ ನೀಡಿದ ʼಮಿಲಿಟರಿ ಮತ್ತು ಸೆಕ್ಯುರಿಟಿ ಡೆವಲಪ್‌ಮೆಂಟ್ಸ್ ಇನ್ವೋಲ್ವಿಂಗ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ: 2025ʼ ಎಂಬ ವರದಿಯಲ್ಲಿ ಈ ಶಾಕಿಂಗ್‌ ವಿಚಾರಗಳನ್ನು ಉಲ್ಲೇಖಿಸಿದೆ. ಈ ವರದಿಯ ಪ್ರಕಾರ ಚೀನಾ 2020 ರಿಂದ ಇಲ್ಲಿಯವರೆಗೆ ಎರಡು ಹಂತಗಳಲ್ಲಿ ಒಟ್ಟು 36 J-10C ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಮೇ 2025 ರ ಹೊತ್ತಿಗೆ J-10Cನ 20 ಯೂನಿಟ್‌ಗಳನ್ನು ವಿತರಿಸಲಾಗಿದೆ.

ಈ ಯುದ್ದ ವಿಮಾನಗಳ ಸಂಖ್ಯೆಯು ಭಾರತದಲ್ಲಿರುವ ರಾಫೇಲ್ ಯುದ್ಧ ವಿಮಾನಗಳ ಸಂಖ್ಯೆಗೆ (36) ಸಮನಾಗಿದೆ. ಹೀಗಾಗಿ ಚೀನಾ ಈ ಮೂಲಕ ಪಾಕಿಸ್ತಾನವನ್ನು ಭಾರತದ ವಿರುದ್ದ ಯುದ್ದಕ್ಕೆ ಸಜ್ಜುಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.

ಭಾರತಕ್ಕೆ ಪಾಕ್‌-ಚೀನಾ ಶಾಕ್‌! ಪಾಕಿಸ್ತಾನಕ್ಕೆ ವರ್ಷಾಂತ್ಯಕ್ಕೆ ಸ್ಟೆಲ್ತ್‌ ಫೈಟರ್‌ ಜೆಟ್‌! ಇಂಡಿಯಾಗೆ AMCA ಯಾವಾಗ? ಆತಂಕ ಏನು? ಇನ್ನು, ಚೀನಾ ಪಾಕಿಸ್ತಾನಕ್ಕೆ 3 ರೀತಿಯ ಯುದ್ಧ ವಿಮಾನಗಳನ್ನು ರಫ್ತು ಮಾಡುತ್ತಿದ್ದು, ಅವುಗಳಲ್ಲಿ 5th ಜೆನ್‌ FC-31, 4th ಜೆನ್‌ J-10C ಬಹುಮುಖ ಯುದ್ಧ ವಿಮಾನ ಮತ್ತು ಚೀನಾ-ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿ ಪಡಿಸಿದ JF-17 ಲಘು ಯುದ್ಧ ವಿಮಾನ ಸೇರಿವೆ. ಈ J-10 ವಿಮಾನದ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ PL-15 ಏರ್-ಟು-ಏರ್ ಕ್ಷಿಪಣಿಯೂ ಒಂದಾಗಿದೆ.ಪಾಕಿಸ್ತಾನ ವಾಯುಪಡೆಯು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯೊಂದಿಗೆ ನಡೆದ ಘರ್ಷಣೆಯಲ್ಲಿ ಈ ಕ್ಷಿಪಣಿಯನ್ನು ಬಳಸಿತ್ತು.

ಅಲ್ಲದೆ, ಕಾರ್ಯಕ್ಷಮತೆಗಾಗಿ ಸುಧಾರಿಸಲಾಗಿರುವ ಅಥವಾ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿರುವ ಈ ಯುದ್ದವಿಮಾನಗಳನ್ನು ಚೀನಾ ಕಾಲಕಾಲಕ್ಕೆ ಬಹಿರಂಗ ಪಡಿಸುತ್ತಾ ಬಂದಿದೆ. 2023 ರಲ್ಲಿ, ಚೀನಾ ದೂರಗಾಮಿ PL-17 ಏರ್-ಟು-ಏರ್ ಕ್ಷಿಪಣಿಯನ್ನು ಬಹಿರಂಗಪಡಿಸಿತ್ತು. ನವೆಂಬರ್ 2024 ರಲ್ಲಿ ಏರ್ ಶೋ ಚೀನಾದಲ್ಲಿ, PL-12A, PL-15, ಮತ್ತು PL-11 AAM ಗಳ ರಫ್ತು ಆವೃತ್ತಿಗಳನ್ನು ಪ್ರದರ್ಶಿಸಲಾಗಿತ್ತು ಎಂದು ಪೆಂಟಗಾನ್‌ ವರದಿಯಲ್ಲಿ ತಿಳಿಸಿದೆ.

ಏನಿದು J-10C ಯುದ್ದವಿಮಾನ, ಇದರ ಸಾಮರ್ಥ್ಯವೇನು?

ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ ಈ ವಿಮಾನವನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ ಮತ್ತು ನೌಕಾಪಡೆಗಾಗಿ ವಿನ್ಯಾಸಗೊಳಿಸಿರುವ ಈ J-10 ಯುದ್ದ ವಿಮಾನವು ಚೀನಾದಲ್ಲಿ ಅಭಿವೃದ್ಧಿಪಡಿಸಲಾದ, ಒಂದೇ ಎಂಜಿನ್ ಹೊಂದಿರುವ, ಬಹುಮುಖ ಯುದ್ಧ ವಿಮಾನವಾಗಿದ್ದು, ಇದು ಡೆಲ್ಟಾ ವಿಂಗ್ ಮತ್ತು ಕ್ಯಾನಾರ್ಡ್ ವಿನ್ಯಾಸವನ್ನು ಹೊಂದಿದೆ. ಇದರ ಗರಿಷ್ಠ ವೇಗ Mach 1.8 ಆಗಿದ್ದು, ಇದನ್ನು ಚೀನಾದ ಸೇನೆ ಮಾತ್ರವಲ್ಲದೆ, ಪಾಕಿಸ್ತಾನವೂ ಸಹ J-10 ಖರೀದಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 600 ಕ್ಕೂ ಹೆಚ್ಚು J-10 ವಿಮಾನಗಳು ಉತ್ಪಾದನೆಯಾಗಿವೆ.

ಆಪರೇಷನ್‌ ಸಿಂಧೂರ ನಷ್ಟದ ಬಗ್ಗೆ ಸಿಡಿಎಸ್‌ ಅನಿಲ್‌ ಚೌಹಾಣ್‌ ಹೇಳಿಕೆ ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಪಾಕಿಸ್ತಾನ ಉಪಯೋಗಿಸಿದ್ದ ಈ PL-15 ಕ್ಷಿಪಣಿಯು ಚೀನಾ (ದೀರ್ಘ-ಶ್ರೇಣಿಯ ಆವೃತ್ತಿ) ಮತ್ತು ಪಾಕಿಸ್ತಾನ (ರಫ್ತು ಆವೃತ್ತಿ) ಎರಡಕ್ಕೂ ಲಭ್ಯವಿದೆ. ಆದಾಗ್ಯೂ, ಚೀನಾ ತನ್ನ ಆವೃತ್ತಿಯಲ್ಲಿ ಹೆಚ್ಚು ಕಾರ್ಯಾಚರಣಾ ಪರಿಣಾಮಕಾರಿ ವ್ಯಾಪ್ತಿಯನ್ನು (ಸುಮಾರು 250 ಕಿ.ಮೀ.ಗೆ ಹೋಲಿಸಿದರೆ ಪಾಕಿಸ್ತಾನಿ ರಫ್ತು ಆವೃತ್ತಿಗೆ ಸುಮಾರು 150 ಕಿ.ಮೀ.) ಹೊಂದಿದೆ.

ಪಹಲ್ಗಾಮ್‌ ದಾಳಿಗೂ ಕೆಲ ದಿನಗಳ ಮುನ್ನವೇ PL-15 ರವಾನೆ ಪಹಲ್ಗಾಮ್ ಭಯೋತ್ಪಾದಕ ಘಟನೆಯ ಕೆಲವು ದಿನಗಳ ಮೊದಲು, ಚೀನಾ ಪಾಕಿಸ್ತಾನಕ್ಕೆ ದೂರಗಾಮಿ PL-15 ಕ್ಷಿಪಣಿಗಳನ್ನು ರವಾನಿಸಿತ್ತು. ಈ ಎಲ್ಲಾ ಬೆಳವಣಿಗೆಗಳು ದಕ್ಷಿಣ ಏಷ್ಯಾದಲ್ಲಿನ ಭದ್ರತಾ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೀಗೆ ಚೀನಾ ಒಂದುಕಡೆಯಲ್ಲಿ ಭಾರತದೊಂದಿಗೆ ಸ್ನೇಹವಾಗಿರುವಂತೆ ಬೆಳವಣಿಗಗಳು ಕಾಣಿಸುತ್ತಿದ್ದರೂ ಪಾಕಿಸ್ತಾನಕ್ಕೆ ಯುದ್ದ ವಿಮಾನಗಳು ಸೇರಿದಂತೆ ಕ್ಷಿಪಣಿಗಳನ್ನು ನಿರಂತರವಾಗಿ ನೀಡುತ್ತಿದೆ. ಚೀನಾದ ಈ ಕ್ರಮವು ಪ್ರಾದೇಶಿಕ ಶಕ್ತಿ ಸಮತೋಲನವನ್ನು ಬದಲಾಯಿಸುವ ಸಾಧ್ಯತೆಯಿದ್ದು, ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದು ಈ ವರದಿ ಸೂಚಿಸುತ್ತಿದೆ.”

Leave a comment

Leave a Reply

Your email address will not be published. Required fields are marked *

Related Articles

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಸಂದರ್ಭದಲ್ಲಿ ಮೋದಿ ಸರಕಾರದ ನಿಲುವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದಂತಹ ಪರಿಸ್ಥಿತಿಯ ನಡುವೆ, ಹಿರಿಯ ಕಾಂಗ್ರೆಸ್ ನಾಯಕ...

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಟಿಎಂಸಿಯಲ್ಲಿ ಭುಗಿಲೆದ್ದ ಅಸಮಾಧಾನ

ಕೋಲ್ಕತ್ತಾ: ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ...

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ  ಸೇರಿದಂತೆ 40ಪ್ರಮುಖರು ಬಿಜೆಪಿಗೆ ಸೇರ್ಪಡೆ

“ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ....

ಮಹಿಳೆಯರ ಬಗ್ಗೆ ಅಶ್ಲೀಲ ಹಾಡು ಹಾಡಿದ ರ‍್ಯಾಪರ್ ಬಾದ್‌ಶಾ ಹಣೆಗೆ ನೇರವಾಗಿ ‘ಗುಂಡು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ

“ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಗಾಯಕ-ರ‍್ಯಾಪರ್ ಬಾದ್‌ಶಾ ಅವರ ಹರಿಯಾಣ ಭಾಷೆಯ ಹಾಡು ‘ಟಟೀರಿ’ ಸುತ್ತಲಿನ...