ಪಡಿತರ ಅಕ್ಕಿಯನ್ನು ಪಾಲಿಷ್‌ ಮಾಡಿ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ 

51

ಬಳ್ಳಾರಿ : 8 ತಿಂಗಳಲ್ಲಿ 482 ಪ್ರಕರಣಗಳು ಪತ್ತೆ, 29,603 ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ ವಶಕ್ಕೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗುಜರಾತ್‌ಗೆ ಸಾಗಣೆ ಪಡಿತರ ಅಕ್ಕಿಯನ್ನು ಪಾಲಿಷ್‌ ಮಾಡಿ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮತ್ತೊಂದು ಅಕ್ರಮ ಕೂಟವೂ ಸಕ್ರಿಯವಾಗಿದೆ.

ರಾಜ್ಯದ ಬಡ, ಅಸಹಾಯಕ, ಹಿಂದುಳಿದ ವರ್ಗಗಳ ಕುಟುಂಬಗಳ ಹಸಿವು ನೀಗಿಸಬೇಕಾದ ಅನ್ನಭಾಗ್ಯ ಯೋಜನೆಯ ಅಪಾರ ಪ್ರಮಾಣದ ಪಡಿತರ ಅಕ್ಕಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್‌ ಸೇರಿ ದೇಶದ ನಾನಾ ರಾಜ್ಯಗಳಲ್ಲಿ ಬೇಯುತ್ತಿರುವುದು ಬೆಳಕಿಗೆ ಬಂದಿದೆ.

ಅಕ್ರಮ ಪಡಿತರ ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 482ಪ್ರಕರಣಗಳು ದಾಖಲಾಗಿವೆ. 29,603 ಕ್ವಿಂಟಾಲ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಈ ವಿವರಗಳೇ ಅಕ್ರಮ ಸಾಗಣೆಯ ವಿರಾಟ ಸ್ವರೂಪವನ್ನು ಪರಿಚಯಿಸುತ್ತಿವೆ.

ಜಿಲ್ಲಾವಾರು ಪ್ರಕರಣಗಳ ವಿವರ: ಬಾಗಲಕೋಟೆ ಜಿಲ್ಲೆ27, ಕಲಬುರಗಿ 35, ಗದಗ 26, ಚಾಮರಾಜನಗರ 36, ಮೈಸೂರು 33, ವಿಜಯಪುರ 36, ಬೀದರ್‌ 32, ಬಳ್ಳಾರಿ 33, ರಾಯಚೂರು 21, ಬೆಳಗಾವಿ 23, ಕೊಪ್ಪಳ 20, ವಿಜಯನಗರ 19, ದಾವಣಗೆರೆ 17, ಬೆಂಗಳೂರು ದಕ್ಷಿಣ(ರಾಮನಗರ) 15, ಶಿವಮೊಗ್ಗ 6, ಹಾಸನ 3, ಧಾರವಾಡ 8, ಹಾವೇರಿ 10, ತುಮಕೂರು 3, ಬೆಂಗಳೂರು ದಕ್ಷಿಣ ವಲಯ 4, ಪಶ್ಚಿಮ ವಲಯ 5, ಪೂರ್ವ ವಲಯ 1, ಬೆಂಗಳೂರು ಗ್ರಾಮಾಂತರ 3, ದಕ್ಷಿಣ ಕನ್ನಡ 2, ಮಂಡ್ಯ 5, ಕೋಲಾರ 1, ಕೊಡಗು 3, ಚಿಕ್ಕಮಗಳೂರು 1, ಯಾದಗಿರಿ 2, ಚಿತ್ರದುರ್ಗ 9, ಬೆಂಗಳೂರು ನಗರ 1, ಉತ್ತರ ಕನ್ನಡ 6, ಉಡುಪಿ ಜಿಲ್ಲೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಗಡಿಭಾಗದ ಜಿಲ್ಲೆಗಳಲ್ಲಿ ವಿಶೇಷವಾಗಿ ಭತ್ತ ಬೆಳೆಯುವ ಜಿಲ್ಲೆಗಳಲ್ಲೇ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ದಂಧೆಯ ಆಳ, ಆಗಲ ಲೆಕ್ಕಕ್ಕೆ ನಿಲುಕದ್ದಾಗಿದೆ.

ಈ ರಾಜ್ಯಗಳಿಗೆ ಪಡಿತರ ಸಾಗಣೆ: ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುವ ಪಡಿತರ ಅಕ್ಕಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಜಾಲ ಹೆಮ್ಮರವಾಗಿ ಬೆಳೆದಿದೆ. ಕಾಳಸಂತೆಯಲ್ಲಿ ಸಂಗ್ರಹಿಸಲಾಗುವ ನೂರಾರು ಟನ್‌ ಪಡಿತರ ಅಕ್ಕಿಯನ್ನು ಆಂಧ್ರ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂಬುದು ಆಹಾರ ಇಲಾಖೆಯ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದೆ.

ಈ ದಂಧೆಯ ಜತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಡಿತರ ಅಕ್ಕಿಯನ್ನು ಪಾಲಿಷ್‌ ಮಾಡಿ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮತ್ತೊಂದು ಅಕ್ರಮ ಕೂಟವೂ ಸಕ್ರಿಯವಾಗಿದೆ. ಸಾಗಣೆ ವಾಹನ ಪತ್ತೆಯ ಸವಾಲು: ಅಕ್ರಮ ಪಡಿತರ ಅಕ್ಕಿ ಸಾಗಣೆಯ ವಾಹನಗಳನ್ನು ಪತ್ತೆ ಹಚ್ಚುವುದು ಆಹಾರ ಇಲಾಖೆ ಹಾಗೂ ಪೊಲೀಸರಿಗೆ ಸವಾಲಾಗಿದೆ.

ಪಡಿತರ ಅಕ್ಕಿ ಚೀಲಗಳನ್ನು ಸಾಗಿಸುವ ವಾಹನಗಳ ಹಿಂದೆ ಮತ್ತು ಮುಂದೆ ಭದ್ರತಾ ವಾಹನಗಳಂತೆ ಖಾಸಗಿ ವಾಹನಗಳು ಪ್ರತಿ ಹೆಜ್ಜೆಯಲ್ಲಿ ಸಂಚರಿಸುತ್ತವೆ. ಅಕ್ರಮ ಪಡಿತರ ಹೊತ್ತ ವಾಹನಗಳು ರಾಜ್ಯದ ಆಯಾ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಂತೆ ದಂಧೆಕೋರರ ಜಾಲ ಸಕ್ರಿಯಗೊಂಡು ವಾಹನವನ್ನು ಗಡಿಭಾಗದವರೆಗೆ ಅಧಿಕಾರಿಗಳ ಕಣ್ತತಪ್ಪಿಸಿ ಸಾಗಿಸಲು ನೆರವುನೀಡುತ್ತದೆ.

ಒಂದು ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಗುವ ಸುಳಿವು ಸಿಕ್ಕರೆ, ದಿಢೀರ್‌ ಮಾರ್ಗ ಬದಲಾಯಿಸಲಾಗುತ್ತದೆ. ಕೆಲವೊಮ್ಮೆ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆದ ಘಟನೆಗಳು ಕೆಲವೆಡೆ ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಅಕ್ರಮ ಪಡಿತರ ಸಾಗಣೆ, ಮಾರಾಟದ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ.

ನಿರಂತರ ದಾಳಿ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಡಿಸಿ ನೇತೃತ್ವದಲ್ಲಿನಾಲ್ಕೈದು ಸಭೆ ನಡೆಸಿ ಕಡಿವಾಣಕ್ಕೆ ನಾನಾ ಕ್ರಮಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಬಳ್ಳಾರಿ ಮಾರ್ಗವಾಗಿ ಆಂಧ್ರಕ್ಕೆ ತೆರಳುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿ 329ಕಿ ಕ್ವಿಂಟಾಲ್ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ ಸಕೀನಾ ಉಪನಿರ್ದೇಶಕರು, ಆಹಾರ ಇಲಾಖೆ, ಬಳ್ಳಾರಿ”

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಬಸನಗೌಡ ಪಾಟೀಲ್ ಯತ್ನಾಳ್

“ಬೆಂಗಳೂರು: ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಎಂದು ನನಗನ್ನಿಸುತ್ತದೆ ಎಂದು ಬಸನಗೌಡ...

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...