ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಮಂಗಳೂರು ವತಿಯಿಂದ ಚಿತ್ರಾಪುರ ದುರ್ಗಪರಮೇಶ್ವರಿ ದೇವಸ್ಥಾನದಿಂದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪರಮಪಾದದಿಂದ ಮೂಲ ಪಾದದೆಡೆಗೆ ಭಕ್ತಿ ಧರ್ಮದ ನಡೆ ಪಾದಯಾತ್ರೆ ಕಾರ್ಯಕ್ರಮ ನಡೆಯಿತು

ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ನಡೆಸಿದ ಕೈಂಕರ್ಯ ಸಹಸ್ರಾರು ಮನಸ್ಸು ಗಳನ್ನು ಒಂದು ಗೂಡಿಸುವ ಕ್ಲಾಘನೀಯ ಕಾರ್ಯವಾಗಿದೆ. ಸಮಾಜದ ಅವಶ್ಯಕತೆಗೆ ಅನುಗುಣವಾಗಿ ಆಂಬುಲೆನ್ಸ್ ಸೇವೆ ಸಮಾಜ ಕಟ್ಟುವ ಕೆಲಸವಾಗಿದೆ ಎಂದು ಕೇಮಾರು ಸಾಧನಾಶ್ರಮದ ಶ್ರೀ ಈಶ ವಿಠಲದಾಸ ವಿಠಲ ದಾಸ ಸ್ವಾಮೀಜಿ ಹೇಳಿದರು.
ನಿರಂತರ ಸಮಾಜ ಸೇವೆ ಮಾಡುವ ಮೂಲಕ ಮಂಜಣ್ಣ ಬ್ರಿಗೇಡ್ ಅನುಕರಣೀಯ ಸೇವೆ ಮಾಡಿದೆ. ಸಮಾಜ ಕಟ್ಟುನ ಕಾರ್ಯದೊಂದಿಗೆ ಅಶಕ್ತರಿಗೆ ನೆರವು, ಆಂಬುಲೆನ್ಸ್ ಕೊಡುಗೆ ಶ್ರೇಷ್ಠವಾದುದು.ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಬಪ್ಪನಾಡು ದೇವಳದ ಹೊರಾಂಗಣದಲ್ಲಿ ಭಾನುವಾರ ಮಂಜಣ್ಣ ಬ್ರಿಗೇಡ್ ವತಿಯಿಂದ ನಡೆದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ಬಪ್ಪನಾಡು ದೇವಳದವರೆಗೆ ಸಾಗಿ ಬಂದ ಸಹಸ್ರಾರು ಭಕ್ತರ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿಅವರು ಮಾತನಾಡಿದರು
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಕ್ತಿ ಪ್ರೇಮದ ಸಂಕೀರ್ತನೆಗೆ ಭಗವಂತ ಒಲಿಯುತ್ತಾನೆ.ಧಾರ್ಮಿಕ ಧರ್ಮ, ನಂಬಿಕೆಯ ಕಾರ್ಯ ಶ್ಲಾಘನೀಯ ಎಂದರು.

ಬಪ್ಪನಾಡು ಕ್ಷೇತ್ರದ ಆನುವಂಶಿಕ
. ಮೊಕ್ಷೇಸರ ಹಾಗೂ ಮೂಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ ಶುಭ ಹಾರೈಕೆ ನುಡಿದರು.
ಬಿಜೆಪಿ ಜಿಲ್ಲಾ ಬಿಜೆಪಿ ಪೂರ್ವಾಧ್ಯಕ್ಷ ಸುದರ್ಶನ್, ಗೀತಾ ವೇಣುಗೋಪಾಲ್ ಇಡ್ಕ, ಕಸ್ತೂರಿ ಪಂಜ, ಗಣೇಶ್ ಹೊಸಬೆಟ್ಟು, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟುಗುತ್ತು,ಉಡುಪಿ ಶಿವಕುಮಾರ್ ಕರ್ಜೆ
ರತನ್, ಜಯಪ್ರಕಾಶ್ ವಾಮಂಜೂರು, ನಯನಾ ಕೋಟ್ಯಾನ್, ಧರ್ಮೇಂದ್ರ ಗಣೇಶ್ ಪುರ, ಕೇಶವ ಹೊಸಬೆಟ್ಟು ಲೋಕೇಶ್, ಮಂಜಣ್ಣ ಬ್ರಿಗೇಡ್ ಅಧ್ಯಕ್ಷ ರಂಜಿತ್ ಜೆ.ಶೆಟ್ಟಿ ವಸಂತ ಕುಲಾಲ್ ಉಪಸ್ಥಿತರಿದ್ದರು

ಶಾಸಕ ಉಮಾನಾಥ ಕೋಟ್ಯಾನ್ ಪಾದಯಾತ್ರೆಯಲ್ಲಿ ಭಾಗವಹಿಸಿ, ಶುಭಹಾರೈಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ
ದಿ.ವೇಣುಗೋಪಾಲ್ಇಡ್ಯ ಸ್ಮರಣಾರ್ಥ ಮಂಜಣ್ಣ ಬ್ರಿಗೇಡ್ ವತಿಯಿಂದ ಸಾರ್ವಜನಿಕ ಸೇವೆಗಾಗಿ ಆಂಬ್ಯುಲೆನ್ಸ್ ಕೊಡುಗೆ ನೀಡಲಾಯಿತು
Leave a comment