ದಾವಣಗೆರೆ : ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದ ಒಳ ಹರಿವು ಸಂಪೂರ್ಣ ಕುಸಿದಿದ್ದು, ಚಳಿಗಾಲದಲ್ಲಿಯೇ ಬೇಸಿಗೆ ದಿನಗಳನ್ನು ನೆನಪಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಳ ಹರಿವು ಪ್ರಮಾಣ ಕ್ಷೀಣಿಸುವುದರ ಜೊತೆಗೆ ನೀರಿನ ಮಟ್ಟವೂ ಒಂದು ಅಡಿ ಕಡಿಮೆಯಿದೆ.
ಚಳಿಗಾಲದಲ್ಲೇ ಬೇಸಿಗೆ ದಿನಗಳ ನೆನಪು ರೈತರಿಗೆ ಜಲಾಶಯದ ನೀರು ಬೇಗ ಖಾಲಿ ಆಗುವ ಆತಂಕ ಈ ಬಾರಿ ಜಲಾಶಯದಲ್ಲಿ, ಕಳೆದ ವರ್ಷಕ್ಕಿಂತ ಒಂದು ಅಡಿ ಕಡಿಮೆ ನೀರಿದೆ. ಕಳೆದ ವರ್ಷ 182 ಅಡಿ ನೀರಿದ್ದರೆ, ಈ ಬಾರಿ 181 ಅಡಿ ನೀರಿದೆ.
ಈಗ ಮುಂಗಾರು ಹಂಗಾಮು ಮುಗಿದಿದೆ. ನಂತರ ಬೇಸಿಗೆ ಹಂಗಾಮು ಶುರುವಾಗಲಿದ್ದು ಮುಂದಿನ ತಿಂಗಳು ಜನವರಿ ಮೊದಲ ವಾರದಲ್ಲಿ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸಬೇಕಿದೆ. ಒಳ ಹರಿವು ಕ್ಷೀಣಿಸಿರುವುದರಿಂದ ಡ್ಯಾಂ ನೀರು ಬೇಗನೆ ಖಾಲಿ ಆಗಲಿದೆ.

55 ಕ್ಯುಸೆಕ್ ಒಳ ಹರಿವು: ಕಳೆದ ಒಂದು ವಾರದಿಂದ ಭದ್ರಾ ಡ್ಯಾಂ ಒಳಹರಿವು ಕುಸಿದಿದೆ. ಈಗ 55ರಿಂದ 65 ಕ್ಯುಸೆಕ್ ಮಾತ್ರ ಹರಿದು ಬರುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿಒಳ ಹರಿವು ಕ್ಷೀಣಿಸಿದೆ. ಹಿಂದಿನ ವರ್ಷ ಡಿಸೆಂಬರ್ ಒಂದರಂದು 286 ಕ್ಯುಸೆಕ್ ಒಳಹರಿವು ಇತ್ತು,
ನಂತರ ಸೈಕ್ಲೋನ್ ಕಾರಣಕ್ಕೆ ಡಿಸೆಂಬರ್ ತಿಂಗಳಲ್ಲಿಒಳ ಹರಿವು ಚೆನ್ನಾಗಿತ್ತು, ಡಿಸೆಂಬರ್ 15ರ ಹೊತ್ತಿಗೆ ಮತ್ತೆ 1420 ಕ್ಯುಸೆಕ್ಗೆ ಏರಿಕೆ ಆಗಿತ್ತು. ಇದೇ ರೀತಿ ಡಿಸೆಂಬರ್ ಕೊನೆಯವರೆಗೂ 1311 ಕ್ಯುಸೆಕ್ ಒಳ ಹರಿವು ಇದ್ದಿದ್ದರಿಂದ ಡ್ಯಾಂ ಬೇಸಿಗೆ ಹಂಗಾಮಿನಲ್ಲೂ ಡ್ಯಾಂನಲ್ಲಿ ಶೇಖರಣೆಯಾಗಿದ್ದ ನೀರು ಹೆಚ್ಚು ಖರ್ಚಾಗಿರಲಿಲ್ಲ.

ಹಿಂದಿನ ವರ್ಷ ಬೇಸಿಗೆಯ ದಿನಗಳ ಮಾರ್ಚ್ 17ರ ಅಜುಬಾಜಿನ ದಿನಗಳಲ್ಲಿ ಒಳ ಹರಿವು ಸಂಪೂರ್ಣ ಕ್ಷೀಣಿಸಿ ಕೇವಲ 28 ಕ್ಯುಸೆಕ್ ಇತ್ತು. ಒಂದು ವಾರ ಕಾಲ ಮಾತ್ರ ಈ ರೀತಿ ಒಳಹರಿವು ಇದ್ದರೆ, ನಂತರ ಮುಂಗಾರು ಪೂರ್ವ ಮಳೆಯಿಂದಾಗಿ ಒಂದಿಷ್ಟು ಏರಿಕೆಯಾಗಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ಮಧ್ಯೆ ಒಂದೆರಡು ದಿನಗಳ ಕಾಲ 55 ಕ್ಯುಸೆಕ್ ಒಳಹರಿವು ಇದ್ದರೆ, ಮೇ 25ರ ನಂತರವೇ ಒಳ ಹರಿವು ಆರಂಭವಾಗಿತ್ತು. ಹಾಗಾಗಿಯೇ ಇತಿಹಾಸದಲ್ಲಿ ಎರಡನೇ ಬಾರಿ ಜುಲೈ 15ರ ಹೊತ್ತಿಗೆ ಡ್ಯಾಂ ನೀರಿನ ಮಟ್ಟ 180 ಅಡಿ ಮುಟ್ಟಿತು. ಈ ಬಾರಿ ಈಗಲೇ ಡ್ಯಾಂ ಒಳ ಹರಿವು ಭಾರಿ ಕುಸಿದಿದೆ, ಸೈಕ್ಲೋನ್ ಈ ರೀತಿಯಾಗಿ ಮಳೆ ಬಂದರೆ ಮಾತ್ರ ಒಳಹರಿವು ಬರಲಿದೆ.
ಇಲ್ಲದಿದ್ದರೆ ಬೇಸಿಗೆ ಹೊತ್ತಿಗೆ ನದಿ ಸಂಪೂರ್ಣ ಬತ್ತಿ ಹೋಗುವ ಅಪಾಯವಿದೆ. ಕಳೆದ ಬಾರಿಗಿಂತ ಕಡಿಮೆ ನೀರು ಈ ಬಾರಿ ಜಲಾಶಯದಲ್ಲಿ, ಕಳೆದ ವರ್ಷಕ್ಕಿಂತ ಒಂದು ಅಡಿ ಕಡಿಮೆ ನೀರಿದೆ. ಕಳೆದ ವರ್ಷ 182 ಅಡಿ ನೀರಿದ್ದರೆ, ಈ ಬಾರಿ 181 ಅಡಿ ನೀರಿದೆ. ಬೇಸಿಗೆ ಹಂಗಾಮು ಮುಗಿಯುವ ಹೊತ್ತಿಗೆ ಇನ್ನಷ್ಟು ಕಡಿಮೆ ಆಗಲಿದೆ.”

Leave a comment