ಹೊಸದಿಲ್ಲಿ:ಅಕ್ರಮವಾಗಿ ಭಾರತ ಗಡಿ ದಾಟಿ ಒಳ ನುಸುಳಿದ ಇಬ್ಬರು ಬ್ರಿಟಿಷ್ ವೈದ್ಯರ ಬಂಧನ ನೇಪಾಳದಲ್ಲಿ ಮೆಡಿಕಲ್ ಕ್ಯಾಂಪ್ ಗೆ ಬಂದಿದ್ದ ವೈದ್ಯರು ದಾಖಲೆಗಳಿಲ್ಲದೆ ನೇಪಾಳ-ಭಾರತ ಗಡಿ ಮೂಲಕ ಭಾರತಕ್ಕೆ ಬಂದಿರುವ ಆರೋಪ ಬಂಧಿತ ವೈದ್ಯರಲ್ಲಿ ಒಬ್ಬರು ಕರ್ನಾಟಕ ಮೂಲದ 61 ವರ್ಷದ ವೈದ್ಯರಾದರೇ, ಇನ್ನೊಬ್ಬರು ಪಾಕಿಸ್ತಾನ ಮೂಲದ ವೈದ್ಯರು
ಇತ್ತಿಚೇಗೆಷ್ಟೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಜನತೆ ವೈಟ್ ಕಾಲರ್ ಟೆರರಿಸಂನ ಭಯಾನಕತೆಯಿಂದ ಬೆಚ್ಚಿಬಿದ್ದಿದ್ದಾರೆ.ಈ ಬೆನ್ನಲ್ಲೆ, ನೇಪಾಳದಲ್ಲಿ ವೈದ್ಯಕೀಯ ಕ್ಯಾಂಪ್ ಗೆಂದು ಬಂದಿದ್ದ ಇಂಗ್ಲೆಡ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವೈದ್ಯರು ಭಾರತ ಗಡಿಯನ್ನು ದಾಟಿ ಅಕ್ರಮವಾಗಿ ಒಳ ನುಸುಳಿದ್ದು ಆತಂಕ ಹೆಚ್ಚಿಸಿದೆ, ಅಕ್ರಮ ಗಡಿ ನುಸುಳುವಿಕೆ ಆರೋಪದಲ್ಲಿ ಬಂಧನವಾಗಿದ್ದಾರೆ.
ಭಾರತದ ಗಡಿ ದಾಟಿ ಉತ್ತರ ಪ್ರದೇಶದ ಬಹರೈಚ್ಗೆ ಕಾಲ್ನಡಿಗೆಯಲ್ಲಿ ಅಗತ್ಯ ದಾಖಲೆಗಳಿಲ್ಲದೆ ದೇಶ ಪ್ರವೇಶಿಸಿದ್ದಕ್ಕಾಗಿ ಜೈಲು ಸೇರಿರುವ ಇಬ್ಬರು ವೈದ್ಯರಲ್ಲಿ ಒಬ್ಬರು ಭಾರತೀಯ ಮೂಲದವರಾಗಿದ್ದು, ಕರ್ನಾಟಕದರಾಗಿದ್ದರೆ, ಇನ್ನೊಬ್ಬರು ಪಾಕಿಸ್ತಾನ ಮೂಲದವರು ಎಂದು ತಿಳಿದುಬಂದಿದೆ. ಇವರು ತಾವು ಕೇವಲ ಮಾರುಕಟ್ಟೆಯನ್ನು ಅನ್ವೇಷಿಸಲು ಅಂದರೆ ಸುತ್ತಾಡಿ ನೋಡಲು ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಭಾರತಕ್ಕೆ ಅಕ್ರಮವಾಗಿ ನುಸುಳಿದ ಇಂಗ್ಲೆಡ್ ಪಾಸ್ ಪೋರ್ಟ್ ಹೊಂದಿರುವ ವೈದ್ಯರು ಭಾರತಕ್ಕೆ ಅಕ್ರಮವಾಗಿ ನುಸುಳಿರುವ ಇಬ್ಬರು ವೈದ್ಯರು ಇಂಗ್ಲೆಡ್ನ ಪಾಸ್ ಪೋರ್ಟ್ ಹೊಂದಿದ್ದಾರೆ. ಬ್ರಿಟನ್ ನಲ್ಲಿ ಶ್ರವಣ ದೋಷಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತಿ ಹೊಂದಿರುವ ಆಡಿಯಾಲಜಿಸ್ಟ್ಗಳಾಗಿದ್ದಾರೆ. ಇವರು ನೇಪಾಳದ ಖಾಸಗಿ ಆಸ್ಪತ್ರೆಯ ಆಹ್ವಾನದ ಮೇರೆಗೆ, ಅಲ್ಲಿನ ‘ಇಯರ್ ಕ್ಯಾಂಪ್’ ( Otology camp ) ನಲ್ಲಿ ಭಾಗವಹಿಸಲು ಬಂದಿದ್ದು, ನೇಪಾಳದ ವರ್ಕ್ ವೀಸಾ ಹೊಂದಿದ್ದರು ತಿಳಿದಿದೆ.
ಬಂಧಿತರಲ್ಲಿ ಇದ್ದಾರೆ ಕರ್ನಾಟಕ ಮೂಲದ ವೈದ್ಯೆ ಘಟನೆ ನಡೆದದ್ದು ನವೆಂಬರ್ 15 ರಂದು, ಬೆಳಿಗ್ಗೆ ಸುಮಾರು 10 ಗಂಟೆಗೆ. ಸಶಸ್ತ್ರ ಸೀಮಾ ಬಲ್ (SSB) ಸಿಬ್ಬಂದಿ ರೂಪೈಡಿಹಾ ಗಡಿ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಇಬ್ಬರು ಬ್ರಿಟಿಷ್ ನಾಗರಿಕರು ಭಾರತದ ಗಡಿ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದನ್ನು ಗಮನಿಸಿದರು. ಅವರಲ್ಲಿ ಒಬ್ಬರು ಪಾಕಿಸ್ತಾನಿ ಮೂಲದವರು ಎಂದು ತಿಳಿದಾಗ, SSB ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಂಧನವಾಗಿರುವ ಇಬ್ಬರು ವೈದ್ಯರಲ್ಲಿ 61 ವರ್ಷದ ಒಬ್ಬರು ಭಾರತದ ಕರ್ನಾಟಕ ಮೂಲದರಾಗಿದ್ದು, ಆಕೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿದ್ದರು. ಆದರೆ ಅವರು ಪ್ರವೇಶಿಸಿದ ಗಡಿ ಮಾರ್ಗವು ಭಾರತೀಯ ಮತ್ತು ನೇಪಾಳಿ ನಾಗರಿಕರಿಗೆ ಮಾತ್ರ ಸೀಮಿತವಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ. ಇನ್ನೊಬ್ಬರು 34 ವರ್ಷದ ಪಾಕಿಸ್ತಾನ ಮೂಲದ ವೈದ್ಯರಾಗಿದ್ದಾರು. ಇನ್ನು, ತನಿಖೆ ವೇಳೆ ತಾವು ನೇಪಾಳಗಂಜ್ನಲ್ಲಿ ಕೆಲವು ದಿನಗಳ ಕಾಲ ಉಳಿದುಕೊಂಡಿದ್ದಾಗಿ ತಿಳಿಸಿದ್ದಾರೆ.

ಅಲ್ಲಿನ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ ನಂತರ, ಹತ್ತಿರದ ಮಾರುಕಟ್ಟೆಯನ್ನು ನೋಡಲು ಮತ್ತು ಆ ಪ್ರದೇಶವನ್ನು ಅನ್ವೇಷಿಸಲು ಭಾರತದ ಗಡಿ ಭಾಗಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಅವರಿಗೆ ಭಾರತದಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಹೇಳಿದ್ದಾರೆ.
ವೈಟ್ ಕಾಲರ್ ಟೆರರಿಸಂ; ಭಾರತಕ್ಕೆ ಹೊಸ ಸವಾಲು, ಯಾರೆಲ್ಲಾ ಶಾಮೀಲು? ಗಿರೀಶ್ ಲಿಂಗಣ್ಣ ವಿಶೇಷ ಸಂದರ್ಶನ ಭಾರತ-ನೇಪಾಳ ಗಡಿ ಒಪ್ಪಂದದಲ್ಲೇನಿದೆ? ಭಾರತ-ನೇಪಾಳ ಗಡಿಯ ಬಹರೈಚ್ನ ರೂಪೈಡಿಹಾ-ನೇಪಾಳಗಂಜ್ ಮಾರ್ಗವು ಕೇವಲ ಭಾರತೀಯ ಮತ್ತು ನೇಪಾಳಿ ನಾಗರಿಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಈ ನಿಯಮವನ್ನು ಉಲ್ಲಂಘಿಸಿ, ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿದ್ದರೂ, ಭಾರತೀಯ ಮೂಲದ ವೈದ್ಯೆಯು ಈ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದು ಕಾನೂನುಬಾಹಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ವಿದೇಶಿಯರ ಕಾಯ್ದೆಯ ಸೆಕ್ಷನ್ 14A ಅಡಿಯಲ್ಲಿ ಬಂಧಿಸಿ, ಬಹರೈಚ್ ಜಿಲ್ಲಾ ಜೈಲಿಗೆ ಕಳುಹಿಸಲಾಗಿದೆ.
ಇನ್ನು, ಇತ್ತಿಚೆಗಷ್ಟೇ ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಿಂದ ದೇಶದಲ್ಲಿ ವೈಟ್ ಕಾಲರ್ ಕರಾಳತೆ ಬೆಳಕಿಗೆ ಬಂದಿದ್ದು, ಈ ಮಧ್ಯೆ ವೈದ್ಯರು ಅಕ್ರಮವಾಗಿ ಗಡಿ ನುಸುಳಿ ಬಂದಿರುವುದು ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನ ಮೂಲದ ವೈದ್ಯರು ಈ ಘಟನೆಯಲ್ಲಿ ಇದದ್ದು, ಭದ್ರತಾ ದೃಷ್ಟಿಯಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇನ್ನು, ಈ ಕುರಿತು ಪೊಲೀಸರು ಇವರು ಕೇವಲ ಮಾರುಕಟ್ಟೆ ಅನ್ವೇಷಿಸಲು ಬಂದಿದ್ದರಾ ಅಥವಾ ಬೇರೆ ದುರುದ್ದೇಶವೇನಾದರೂ ಇದೆಯಾ ಎಂದು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.”

Leave a comment