ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ ಮೆರವಣಿಗೆಯಲ್ಲಿ ಲಕ್ಷಾಂತರ ಕನ್ನಡಿಗರು ಪಾಲ್ಗೊಳ್ಳುವ ಮೂಲಕ ಭಾಷಾಭಿಮಾನ, ರಾರಾಜಿಸಿದ ಕನ್ನಡತನ

40

ಬೆಳಗಾವಿ: ಎಲ್ಲಿ ನೋಡಿದರಲ್ಲಿ ಕನ್ನಡ ಬಾವುಟಗಳು, ಕನ್ನಡ ಗೀತೆಗಳ ನಿನಾದ, ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು, ಮುಗಿಲು ಮುಟ್ಟಿದ ಕನ್ನಡಪರ ಘೋಷಣೆಗಳು, ಮೊಳಗಿದ ವಾದ್ಯಮೇಳದ ಸದ್ದು, ಯುವಜನರ ಕುಣಿತ, ಹಿರಿಯರು, ಮಕ್ಕಳಾದಿಯಾಗಿ ಸೇರಿದ್ದ ಜನಸ್ತೋಮದ ಕನ್ನಡ ಮಿಡಿತ… ಬೆಳಗಾವಿಯಲ್ಲಿ ಶನಿವಾರ ರಾಜ್ಯೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸಂಗತಿಗಳಿವು.

ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿಆಗಮಿಸಿದ್ದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ದಿನವಿಡೀ ಅದ್ಧೂರಿ ಮೆರವಣಿಗೆ ನಡೆಯುವ ಮೂಲಕ ಕುಂದಾನಗರಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದರು. ಮೆರವಣಿಗೆಯಲ್ಲಿರೂಪಕ ವಾಹನಗಳ ಎದುರು ಯುವಕರು ಡಿಜೆ ನಾದಕ್ಕೆ ಹೆಜ್ಜೆ ಹಾಕಿದರು.

ದಣಿವರಿಯದೇ ಕುಣಿದರು: ಮೆರವಣಿಗೆಯ ಕೇಂದ್ರ ಸ್ಥಳವಾಗಿದ್ದ ಚನ್ನಮ್ಮ ವೃತ್ತದ ಕಡೆಗೆ ತಂಡೋಪತಂಡವಾಗಿ ಆಗಮಿಸಿದ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ನಾನಾ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿಭಾಗವಹಿಸಿ ರಾಜ್ಯೋತ್ಸವ ಮೆರವಣಿಗೆಗೆ ಕಳೆತಂದವು. ರಾಣಿ ಚನ್ನಮ್ಮ ವೃತ್ತದಲ್ಲಿಕನ್ನಡಪರ ಜೈಕಾರಗಳು ಮುಗಿಲು ಮುಟ್ಟಿದವು.

ಕಣ್ಣು ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಕೆಂಪು-ಹಳದಿ ಬಣ್ಣದ ದಿರಿಸು ಧರಿಸಿ ಬಂದ ಹಲವರು ಕನ್ನಡ ಧ್ವಜ ಬೀಸಿ ಸಂಭ್ರಮಿಸಿದರು. ಕಿವಿಗಡಚಿಕ್ಕುವ ಶಬ್ದ, ಸಿಳ್ಳೆ, ಕೇಕೆಗಳು, ಎದೆ ನಡುಗಿಸುವ ಡಿಜೆ ಸದ್ದು, ಕ್ಷಣಕ್ಷಣಕ್ಕೂ ತೇಲಿಬಂದ ಚಿತ್ರಗೀತೆಗಳಿಗೆ ಕನ್ನಡಾಭಿಮಾನಿಗಳು ದಣಿವರಿಯದೇ ಕುಣಿದರು.

ಬಹುತೇಕರು ಹಳದಿ, ಕೆಂಪು ಬಣ್ಣದಿಂದ ತಮ್ಮ ಕೆನ್ನೆ, ಕೈ ಮೇಲೆ ಚಿತ್ರ ತೆಗೆಯಿಸಿಕೊಂಡು ಕನ್ನಡಾಭಿಮಾನ ಮೆರೆದರು. ಮೆರವಣಿಗೆ ಮಾರ್ಗದುದ್ದಕ್ಕೂ ಬಣ್ಣ ಹಚ್ಚುವವರು, ಕನ್ನಡ ಬಾವುಟ, ಶಾಲು, ನೀರಿನ ಬಾಟಲ್‌, ಉಪಾಹಾರ ಮಾರಾಟ ಮಾಡುವವರು ಭರ್ಜರಿ ವ್ಯಾಪಾರ-ವಹಿವಾಟು ನಡೆಸಿದರು. ಮೆರವಣಿಗೆ ಮಾರ್ಗದಲ್ಲಿಹಾಗೂ ಚನ್ನಮ್ಮ ವೃತ್ತದಲ್ಲಿಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗ ಜಿಲ್ಲಾ ಕ್ರೀಡಾಂಣದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಅಲ್ಲಿಂದ ಮೆರವಣಿಗೆ ಡಾ. ಬಿ.ಆರ್‌. ಅಂಬೇಡ್ಕರ್‌ ರಸ್ತೆ, ಚನ್ನಮ್ಮ ವೃತ್ತ, ಕಾಕತಿ ವೇಸ್‌, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ, ಬೋಗಾರವೇಸ್‌, ಕಾಲೇಜು ರಸ್ತೆ ಮೂಲಕ ಸರಕಾರಿ ಸರ್ದಾರ ಪ್ರೌಢಶಾಲೆಯ ಮೈದಾನ ತಲುಪಿತು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿನಿಂತು ಸಹಸ್ರಾರು ಸಂಖ್ಯೆಯಲ್ಲಿಕನ್ನಡಾಭಿಮಾನಿಗಳು ಭವ್ಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಮೆರವಣಿಗೆ ಮಾರ್ಗದ ರಸ್ತೆ, ವೃತ್ತಗಳು ಕಿಕ್ಕಿರಿದಿದ್ದವು.

ಮೆರವಣಿಗೆಯಲ್ಲಿ ಕಂಡಿದ್ದು… *120ಕ್ಕೂ ಹೆಚ್ಚು ಆಕರ್ಷಕ ರೂಪಕಗಳು

*ಗಮನ ಸೆಳದ ಭುವನೇಶ್ವರಿ, ಪುಲಿಕೇಶಿ, ಕಾಂತಾರ ರೂಪಕಗಳು *ಕನ್ನಡಮಯ ಬಾವುಟ, ಶಾಲು ಧರಿಸಿ ಅಭಿಮಾನಿಗಳ ಸಂಭ್ರಮ *ಮುಖದ ಮೇಲೆ ಕನ್ನಡ ಧ್ವಜದ ಬಣ್ಣ ಬಳಿದುಕೊಂಡಿದ್ದ ಅಭಿಮಾನಿಗಳು

*ಕನ್ನಡಾಭಿಮಾನಿಗಳಿಂದ ತುಂಬಿ ತುಳುಕಿದ ಪ್ರಮುಖ ರಸ್ತೆಗಳು *ತಡರಾತ್ರಿವರೆಗೆ ಕುಣಿದು ಕುಪ್ಪಳಿಸಿದರೂ ಕುಂದದ ಕನ್ನಡೋತ್ಸಾಹ

*ಮೆರವಣಿಗೆಗೆ ಕನ್ನಡಪರ ಸಂಘಟನೆಗಳಿಂದ ಹೂವು ಚೆಲ್ಲಿಸ್ವಾಗತ

*ಚನ್ನಮ್ಮ ವೃತ್ತದಲ್ಲಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ

* ಬೆಳಗ್ಗೆಗಿಂತ ಸಂಜೆ ವೇಳೆ ಹೆಚ್ಚು ಕೂಡಿದ ಜನಸ್ತೋಮ *ಆಕರ್ಷಿಸಿದ ಚನ್ನಮ್ಮ ವೃತ್ತದ ವಿದ್ಯುತ್‌ ಅಲಂಕಾರ *ಜನಸಂದಣಿಯಿಂದ ವಾಹನ ಸವಾರರ ಪರದಾಟ”

Leave a comment

Leave a Reply

Your email address will not be published. Required fields are marked *

Related Articles

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....