ಗೂಗಲ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಡೇಟಾ ಸೆಂಟರ್ ಪ್ರಾಜೆಕ್ಟ್ ಆಂಧ್ರ ಪ್ರದೇಶದ ಪಾಲು ಉಚಿತ ಸ್ಕೀಂ ಕೊಡುತ್ತಿರುವ ನಿಮಗೆ ಗೂಗಲ್ ಪ್ರಾಜೆಕ್ಟ್ ತರಲು ಸಾಧ್ಯವಿಲ್ಲ ಎಂದ ನೆಟ್ಟಿಗರು ಶತಕೋಟಿ ಡಾಲರ್ ಮೌಲ್ಯದ ಗೂಗಲ್ ಪ್ರಾಜೆಕ್ಟ್ ವಿಶಾಖಪಟ್ಟಣಂ ನಲ್ಲಿ ಸ್ಥಾಪನೆ ಗೂಗಲ್ AI ಪ್ರಾಜೆಕ್ಟ್ ಆಂಧ್ರದ ಪಾಲಾಗಿದ್ದು ಯಾಕೆ ಏಷ್ಯಾದ ಅತಿದೊಡ್ದ ಡೇಟಾ ಸೆಂಟರ್ ಕ್ಲಸ್ಟರ್ ಎಂದೂ ಬಿಂಬಿತವಾಗಿರುವ ಗೂಗಲ್ ಸಂಸ್ಥೆಯ ಪ್ರಾಜೆಕ್ಟ್, ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ಸ್ಥಾಪನೆಯಾಗಲಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರ ಸೂಕ್ತವಾದ ಕ್ರಮವನ್ನು ತೆಗೆದುಕೊಂಡಿಲ್ಲ ಎನ್ನುವ ಟೀಕೆ ಎದುರಾಗುತ್ತಿದೆ. ಗೂಗಲ್ ಡೇಟಾ ಸೆಂಟರ್ ಪ್ರಾಜೆಕ್ಟ್ಕೈತಪ್ಪಿದ್ದು ಹೇಗೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕದ ಐಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ನಡುವೆ ಟ್ವೀಟ್ ಸಮರವೇ ನಡೆದಿತ್ತು. ಗೂಗಲ್ ಸಿಇಒ ಸುಂದರ್ ಪಿಚೈ ಅವರು ತಮಿಳು ಭಾಷಿಗರಾಗಿದ್ದರೂ, ಅವರು ಗೂಗಲ್ ಡೇಟಾ ಸೆಂಟರ್ ಪ್ರಾಜೆಕ್ಟಿಗೆ ಭಾರತವನ್ನು ಆಯ್ಕೆ ಮಾಡಿಕೊಂಡರು ಎಂದು ನಾರಾ ಲೋಕೇಶ್ ಹೇಳಿದ್ದರು.
ಗೂಗಲ್ ಪ್ರಾಜೆಕ್ಟ್, ಕರ್ನಾಟಕದಿಂದ ದೂರವಾಗಿದ್ದಕ್ಕೆ ಕೆಪಿಸಿಸಿ ಟ್ವೀಟ್ ಮಾಡಿತ್ತು. ಇದಕ್ಕೆ ನೂರಾರು ಪ್ರತಿಕ್ರಿಯೆಗಳು ಬಂದಿವೆ. ನೀವು ಜನರಿಗೆ ಉಚಿತ ಸ್ಕೀಂ ಅನ್ನು ಕೊಡುತ್ತಾ ಹೋಗಿ ಎಂದು ಕಾಲೆಳೆಯಲಾಗಿದೆ. ಕೆಲವೊಂದು ಪ್ರತಿಕ್ರಿಯೆಯ ಸ್ಯಾಂಪಲ್ ಹೀಗಿದೆ : “ವಾರ್ಷಿಕವಾಗಿ ಸಿದ್ದರಾಮಯ್ಯನವರ ಸರ್ಕಾರ, ಉಚಿತ ಸ್ಕೀಂಗಾಗಿ ಸುಮಾರು ಐವತ್ತರಿಂದ ಎಪ್ಪತ್ತು ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಹೀಗಿರುವಾಗ, ಗೂಗಲ್ ನಂತಹ ಹೂಡಿಕೆಗಳನ್ನು ಕಳೆದುಕೊಳ್ಳುವುದು ಸರಿಯಲ್ಲ.

ನಿಮ್ಮ ಸರ್ಕಾರಕ್ಕೆ ಸರಿಯಾದ ದೂರದೃಷ್ಟಿ ಇದ್ದಿದ್ದಲ್ಲಿ ಮಂಗಳೂರು ಅಥವಾ ಉಡುಪಿಯಂತಹ ಟು-ಟೈರ್ ನಗರಕ್ಕೆ ಇದನ್ನು ತರಬಹುದಾಗಿತ್ತು. ಇದರಿಂದಾಗಿ, ಕರಾವಳಿ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿತ್ತು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ” ಬೆಂಗಳೂರಿನಲ್ಲಿ ಗೂಗಲ್ ಸೆಂಟರ್ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಈಗಲೇ ರಾಜಧಾನಿಯ ಜನತೆ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು, ನೀರು ಫ್ರೀಯಾಗಿ ಕೊಡಲು ಹೇಗೆ ಸಾಧ್ಯ? ಬೆಂಗಳೂರಿನ ರಸ್ತೆಗಳಲ್ಲಿ ದೊಡ್ಡದೊಡ್ಡ ಗಾತ್ರದ ಗುಂಡಿಗಳಿವೆ. ಅದನ್ನು ಮುಚ್ಚಲು ಏನು ಕ್ರಮ ತೆಗೆದುಕೊಂಡಿದ್ದೀರಿ” ಎಂದು ಇನ್ನೊಬ್ಬರು ಸರ್ಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ. ” ಚುನಾವಣೆಯನ್ನು ಕಾಂಗ್ರೆಸ್ ಮೆರಿಟ್ ನಿಂದ ಗೆದ್ದಿದ್ದಲ್ಲ, ಉಚಿತ ಕೊಡುಗೆಯ ಆಮಿಷದಿಂದಾಗಿ. ಜಾತಿಗಣತಿ, ಭಾಷೆಯ ವಿಚಾರವನ್ನು ಮುಂದಿಟ್ಟುಕೊಂಡು ಆಡಳಿತ ನಡೆಸಲಾಗುತ್ತಿದೆ.
ಬೆಂಗಳೂರು ಸಿಲಿಕಾನ್ ವ್ಯಾಲಿ ಎನ್ನುವ ಹೆಸರನ್ನು ಪಡೆದಿದೆ. ಈ ರೀತಿಯ ಆಫರ್ ಗಳನ್ನು ಕೊಟ್ಟಿದ್ದರಿಂದಲೇ ಇಲ್ಲಿ ಐಟಿ ದಿಗ್ಗಜ ಸಂಸ್ಥೆಗಳಿವೆ” ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ” ನೀವು ವಾಟ್ಸಾಪ್ ಪದವೀಧರರಲ್ಲದೇ ಇದ್ದರೆ, ನನ್ನ ಪ್ರಶ್ನೆಗೆ ಉತ್ತರಿಸಿ. ಇನ್ನೂರು ಯೂನಿಟ್ ಉಚಿತ ವಿದ್ಯುತ್, ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಉಚಿತ ಬಸ್ ಪ್ರಯಾಣದ ಸೌಲಭ್ಯ.

ಇದು ರಾಜ್ಯದ ಬೊಕ್ಕಸಕ್ಕೆ ಭಾರವಾಗುವುದಿಲ್ಲವೇ? ಇದರ ಆರ್ಥಿಕ ಪರಿಣಾಮದ ಬಗ್ಗೆ ಚಿಂತನೆಯನ್ನು ಮಾಡಿದ್ದೀರಾ” ಎಂದು ಇನ್ನೊಬ್ಬರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕಾಗಿ ಗೂಗಲ್ ಪ್ರಾಜೆಕ್ಟ್ಆಂಧ್ರ ಪ್ರದೇಶದ ಪಾಲಾಯಿತು ಎನ್ನುವುದಕ್ಕೆ ಕರ್ನಾಟಕ ಕಾಂಗ್ರೆಸ್ ಐಟಿ ಸೆಲ್ ನಾಲ್ಕು ಕಾರಣವನ್ನು ನೀಡಿತ್ತು.
ಅದು ಹೀಗಿದೆ: ಕರ್ನಾಟಕವು ಗೂಗಲ್ ಸಂಸ್ಥೆಯ ಬಹುದೊಡ್ಡ ಹೂಡಿಕೆಯನ್ನು ಕಳೆದುಕೊಂಡಿಲ್ಲ, ಬದಲಾಗಿ, ಪ್ರಾಜೆಕ್ಟ್ ಅನ್ನು ಬೇರೆ ರಾಜ್ಯಕ್ಕೆ ಆಕರ್ಷಿಸಲಾಗಿದೆ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇವೆ. ಸುಮಾರು ಹದಿನೈದು ಶತಕೋಟಿ ಡಾಲರ್ ಮೌಲ್ಯದ ಈ ಪ್ರಾಜೆಕ್ಟ್ ಪ್ರತಿಭೆಗಿಂತ ಬೇರೆ ಕಾರಣಕ್ಕಾಗಿ ಆಂಧ್ರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಗೂಗಲ್, ಫೇಸ್ಬುಕ್ಗೆ ಮೋದಿ ಬರೆ! AI ಕಂಟೆಂಟ್ಗೆ ಲೇಬಲ್ ಕಡ್ಡಾಯ! ಡೀಪ್ಫೇಕ್, ಎಐಗೆ ಬಂತು ಹೊಸ ರೂಲ್ಸ್! ಈ ನಿರ್ಧಾರಕ್ಕೆ ನಾಲ್ಕು ಕಾರಣಗಳಿವೆ, ಅದು ಚಂದ್ರಬಾಬು ನಾಯ್ಡು ಸರ್ಕಾರ ಕೊಟ್ಟ ನಾಲ್ಕು ಭರ್ಜರಿ ಆಫರ್ ಗಳ ಕಾರಣಕ್ಕಾಗಿ, ಅದು ವಿಶಾಖಪಟ್ಟಣಂಗೆ ಸ್ಥಳಾಂತರಗೊಂಡಿದೆ.
ಹದಿನೈದು ವರ್ಷಗಳ ಕಾಲ ಉಚಿತ ವಿದ್ಯುತ್ ಹತ್ತು ವರ್ಷಗಳ ಕಾಲ ಶೇ. 25ರ ದರದಲಿ ನೀರು ಪೂರೈಕೆ ಅತಿ ಕಡಿಮೆ ಬೆಲೆಗೆ 480 ಎಕರೆ ಭೂಮಿ ಗೂಗಲ್ ಸಂಸ್ಥೆಗೆ ಹಸ್ತಾಂತರ ಸುಮಾರು 2,245 ಕೋಟಿ ಮೌಲ್ಯದ SGST ಮರುಪಾವತಿ ಈ ರೀತಿಯ ಆಮಿಷವನ್ನು ಕರ್ನಾಟಕ ಸರ್ಕಾರ ಕೊಡಲು ಸಾಧ್ಯವಿಲ್ಲ.
ಏಕೆಂದರೆ, ರಾಜ್ಯಕ್ಕೆ ಮತ್ತು ರಾಜ್ಯದ ಜನರಿಗೆ ಅದರ ವೆಚ್ಚ ತುಂಬಾ ಜಾಸ್ತಿ. ಕರ್ನಾಟಕ ಸರ್ಕಾರವು ಹೂಡಿಕೆಗಳಿಗಾಗಿ (Investment) ಯಾರನ್ನೂ ಬೇಡಿಕೊಳ್ಳುವುದಿಲ್ಲ, ಒತ್ತಾಯಿಸುವುದಿಲ್ಲ ಅಥವಾ ಬಲವಂತ ಮಾಡುವುದಿಲ್ಲ. ಕರ್ನಾಟಕ ರಾಜ್ಯವು, ಎಫ್ ಡಿಐ ( Foreign direct investment ) ನಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ಹೂಡಿಕೆದಾರರನ್ನು ಆಕರ್ಷಿಸುವ ತಾಕತ್ ಅನ್ನು ಹೊಂದಿದೆ ಎಂದು ಕೆಪಿಸಿಸಿ ಟ್ವೀಟ್ ಮಾಡಿತ್ತು.

Leave a comment