ನಮ್ಮ ಮೆಟ್ರೋ ಅತಿ ಉದ್ದನೆಯ 72 ಕಿಮೀ ಹೊಸ ಮಾರ್ಗ ಆರಂಭಿಸಲು ಬಿಎಂಆರ್‌ಸಿಎಲ್ ಮುಂದು

23

ಬೆಂಗಳೂರು : ಬೆಂಗಳೂರಿನ ಪೂರ್ವ – ದಕ್ಷಿಣ ಭಾಗವನ್ನು ಸಂಪರ್ಕಿಸಲಿದ್ದು, 50 ಕ್ಕೂ ಅಧಿಕ ನಿಲ್ದಾಣ ನಿರ್ಮಾಣಕ್ಕೆ ಯೋಜನೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ದೇಶದ 2 ನೇ ಅತಿ ದೊಡ್ಡ ಕ್ರೀಡಾಂಗಣಕ್ಕೂ ಸಂಪರ್ಕ. ನಮ್ಮ ಮೆಟ್ರೋ ಹೊಸ ಮಾರ್ಗ

ನಮ್ಮ ಮೆಟ್ರೋ ಬರೋಬ್ಬರಿ 72 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಮಾರ್ಗವು ಬೆಂಗಳೂರಿನ ಪೂರ್ವ – ದಕ್ಷಿಣ ಭಾಗವನ್ನು ಸಂಪರ್ಕಿಸಲಿದ್ದು, 50 ಕ್ಕೂ ಅಧಿಕ ನಿಲ್ದಾಣಗಳನ್ನು ಹೊಂದಿರಲಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ದೇಶದ 2 ನೇ ಅತಿ ದೊಡ್ಡ ಕ್ರೀಡಾಂಗಣಕ್ಕೂ ಸಂಪರ್ಕ ಕಲ್ಪಿಸಲು ಯೋಜಿಸಲಾಗುತ್ತಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದ್ಯ ನೇರಳೆ, ಹಸಿರು, ಹಳದಿ ಸೇರಿ 3 ಮಾರ್ಗಗಳು ಕಾರ್ಯಾಚರಣೆ ನಡೆಸುತ್ತಿವೆ. 2026 ರ ಮಧ್ಯಭಾಗದಲ್ಲಿ ನಾಗವಾರ – ಕಾಳೇನ ಅಗ್ರಹಾರ ನಡುವಿನ ಗುಲಾಬಿ ಮಾರ್ಗ, 2027 ಕ್ಕೆ ಸರ್ಜಾಪುರ – ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗ ಆರಂಭವಾಗಲಿದೆ. ಜತೆಗೆ ಬೂದು, ಕಿತ್ತಳೆ ಮಾರ್ಗದ ಕಾಮಗಾರಿಗೆ ಪ್ರಧಾನಿ ಇತ್ತೀಚೆಗೆ ಚಾಲನೆ ಕೊಟ್ಟಿದ್ದರು.

ಇದರೊಂದಿಗೆ ಹೆಬ್ಬಾಳ – ಸರ್ಜಾಪುರ ಕೆಂಪು ಮಾರ್ಗಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಈ ನಡುವೆ ಅತಿ ಉದ್ದದ ಮೆಟ್ರೋ ಮಾರ್ಗಕ್ಕೆ ಯೋಜನೆ ರೂಪಿಸುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ನಮ್ಮ ಮೆಟ್ರೋ ಗುಲಾಬಿ ಮಾರ್ಗ ಆರಂಭಕ್ಕೆ ಮುಹೂರ್ತ; ಯಾವಾಗಿಂದ? ಎಲ್ಲಿಂದ ಎಲ್ಲಿಗೆ?

ಎಲ್ಲೆಲ್ಲಿ ಹಾದು ಹೋಗಲಿದೆ ನಮ್ಮ ಮೆಟ್ರೋ ಹೊಸ ಮಾರ್ಗ ? ಬಿಎಂಆರ್‌ಸಿಎಲ್‌ ರೂಪಿಸಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯು ಕಾಳೇನ ಅಗ್ರಹಾರದಿಂದ ಕಾಡುಗುಡಿ ಟ್ರೀ ಪಾರ್ಕ್‌ವರೆಗೆ ಸಾಗುತ್ತದೆ. ಇದು ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ವೃತ್ತ ಮತ್ತು ವರ್ತೂರು ಕೋಡಿ ಮೂಲಕ ಹಾದುಹೋಗಲಿದೆ.

ಈ ಮಾರ್ಗವು ನಗರದ ಪ್ರಮುಖ ಟೆಕ್ ಹಬ್‌ಗಳಿಗೂ ಸಂಪರ್ಕ ಕಲ್ಪಿಸಲಿದೆ. ಶೀಘ್ರದಲ್ಲಿಯೇ ಅಧ್ಯಯನ ವರದಿ ಸರ್ಕಾರಕ್ಕೆ ದೆಹಲಿ ಮೂಲದ ಇಂಟ್ರೋಸಾಫ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಈ ಹೊಸ ಮೆಟ್ರೋ ಮಾರ್ಗದ ಸಮಗ್ರ ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯು ಮಾರ್ಗದ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧೀನ, ಅಂದಾಜು ವೆಚ್ಚ, ನಿಲ್ದಾಣಗಳ ಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆಯ ಮುನ್ಸೂಚನೆಗಳನ್ನು ಒಳಗೊಂಡಿದೆ.

ಈ ವರದಿಯನ್ನು ಅಕ್ಟೋಬರ್ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ. ಅನುಮೋದನೆ ದೊರೆತ ನಂತರ, ವಿವರವಾದ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಕಾರ್ಯ ಆರಂಭವಾಗಲಿದೆ. ಹೊಸ ಮಾರ್ಗದಲ್ಲೊಂದು ಚಿಕ್ಕ ಮಾರ್ಗ ಈ ಹೊಸ ಮಾರ್ಗವು 3.5 ರಿಂದ 4 ಕಿಲೋಮೀಟರ್ ಉದ್ದದ ಚಿಕ್ಕ ಮಾರ್ಗವೊಂದನ್ನು ಒಳಗೊಂಡಿದೆ. ಈ ಚಿಕ್ಕ ಮಾರ್ಗವು ಜಿಗಣಿಯಿಂದ ಆನೇಕಲ್ ಕಡೆಗೆ ಇರಲಿದೆ.

ಇದರಿಂದ ಬನ್ನೇರುಘಟ್ಟ ಮತ್ತು ಆನೇಕಲ್ ಕಡೆಯಿಂದ ಬರುವ ಜನರು ನೇರವಾಗಿ ಸೂರ್ಯ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಅತಿ ದೊಡ್ಡ ಕ್ರೀಡಾ ಸಂಕೀರ್ಣಕ್ಕೆ ತಲುಪಬಹುದು. ಮುಖ್ಯ ಮಾರ್ಗವು ತನ್ನದೇ ಆದ ಹಾದಿಯಲ್ಲಿ ಮುಂದುವರಿಯುತ್ತದೆ. ಎರಡೂ ಮಾರ್ಗಗಳಲ್ಲಿ ಪ್ರತ್ಯೇಕ ರೈಲುಗಳ ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ಗೆ ವರದಿ ಮಾಡಿದೆ. 2029 ಕ್ಕೆ ಕಾಮಗಾರಿ, ಆ ಬಳಿಕ 10 ವರ್ಷಕ್ಕೆ ಮಾರ್ಗ ಪೂರ್ಣ ಸಾಧ್ಯತೆ ವಿವರವಾದ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಸಾಮಾನ್ಯವಾಗಿ ಒಂದು ವರ್ಷ ಬೇಕಾಗುತ್ತದೆ.

ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅನುಮೋದನೆ ಪಡೆಯಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಎಲ್ಲ ಅನುಮೋದನೆಗಳು ಸರಿಯಾಗಿ ದೊರೆತರೆ, 2029ರ ವೇಳೆಗೆ ನಿರ್ಮಾಣ ಕಾರ್ಯ ಆರಂಭವಾಗಬಹುದು. ನಿರ್ಮಾಣ ಪೂರ್ಣಗೊಳ್ಳಲು 5 ರಿಂದ 10 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ಮೆಟ್ರೋ ಮಾರ್ಗವು ತಾಂತ್ರಿಕವಾಗಿ ಅತ್ಯಂತ ಸವಾಲಿನ ಯೋಜನೆಯಾಗಿದೆ.

ಸರ್ಜಾಪುರ ನಿರ್ಮಾಣವಾಗುತ್ತಿರುವ 1,000 ಎಕರೆ ವಿಸ್ತೀರ್ಣದ ಸ್ಟಾರ್ಟ್‌ಅಪ್‌ಗಳು ಮತ್ತು ಕಾರ್ಯಾಗಾರಗಳಿಗಾಗಿ ಸಮಗ್ರ ಟೌನ್‌ಶಿಪ್ ಯೋಜನೆಯನ್ನು ಸಹ ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ 50ಕ್ಕೂ ಹೆಚ್ಚು ನಿಲ್ದಾಣಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ದೆಹಲಿಗೆ ಸಮನಾಗಲಿದೆ ಬೆಂಗಳೂರು ಮೆಟ್ರೋ ಈ 72 ಕಿಲೋಮೀಟರ್ ಮಾರ್ಗವು, ಬಿಎಂಆರ್‌ಸಿಎಲ್ ಸಿದ್ಧಪಡಿಸುತ್ತಿರುವ 210.9 ಕಿಲೋಮೀಟರ್‌ನ ಬೃಹತ್‌ ಯೋಜನೆಯ ಒಂದು ಭಾಗವಾಗಿದೆ.

ಈ ಬೃಹತ್ ಯೋಜನೆಯು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದನಿರ್ದೇಶನದ ಮೇರೆಗೆ ರೂಪಿಸಲಾಗುತ್ತಿದೆ. ಇದರಲ್ಲಿ ಆರು ಮಾರ್ಗಗಳ ವಿಸ್ತರಣೆ ಮತ್ತು ಎರಡು ಹೊಸ ಮಾರ್ಗಗಳು ಸೇರಿವೆ. ಇದರಿಂದ ಬೆಂಗಳೂರಿನ ಯೋಜಿತ ಮೆಟ್ರೋ ಜಾಲವು 467.69 ಕಿಲೋಮೀಟರ್‌ಗೆ ತಲುಪಲಿದೆ. ಇದು ದೆಹಲಿಯ ಮೆಟ್ರೋ ಜಾಲದ 467 ಕಿಲೋಮೀಟರ್‌ಗೆ ಸಮನಾಗಿರುತ್ತದೆ”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...