ಬೆಂಗಳೂರು: ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಪೂರ್ವಸಿದ್ಧತಾ ಕಾರ್ಯ ಯೋಜನೆಯ ವಿಳಂಬ ತಪ್ಪಿಸಲು, ಗುರುತಿಸಲಾದ 3 ಸ್ಥಳಗಳ ಆರ್ಥಿಕ ಕಾರ್ಯಸಾಧ್ಯತಾ ವರದಿಗಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲು ತಯಾರಿ ಸಂಭಾವ್ಯ ಸ್ಥಳಗಳ ಪಟ್ಟಿಯಲ್ಲಿವೆ ಕನಕಪುರ ರಸ್ತೆಯ ಕಗ್ಗಲೀಪುರ-ಬಿಡದಿ, ಹಾರೋಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ನಡುವಿನ ಪ್ರದೇಶ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಾಂತ್ರಿಕ ವರದಿ ಬರುವ ಮುನ್ನವೇ ಸರ್ಕಾರದಿಂದಈ ಪ್ರಕ್ರಿಯೆ ಆರಂಭ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಆಸಕ್ತಿ ತೋರಿಸಿರುವುದರಿಂದ ರಾಜ್ಯ ಸರ್ಕಾರದ ಯೋಜನೆಗೆ ವೇಗ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಕೆಲಸ ಚುರುಕುಗೊಳಿಸಿದೆ

ಯೋಜನೆಯಲ್ಲಿ ಆಗಬಹುದಾದ ವಿಳಂಬವನ್ನು ತಪ್ಪಿಸಲು, ಸರ್ಕಾರ ತಾನು ಗುರುತಿಸಿದ ಮೂರು ಸಂಭಾವ್ಯ ಸ್ಥಳಗಳಲ್ಲಿ ಆರ್ಥಿಕ ಕಾರ್ಯಸಾಧ್ಯತಾ ವರದಿ (ಫೀಸಿಬಿಲಿಟಿ ರಿಪೋರ್ಟ್) ಸಿದ್ಧಪಡಿಸಲು ಮುಂದಾಗಿದೆ.
ಈ ಸಂಬಂಧ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಾಂತ್ರಿಕ ತಂಡವು ಈಗಾಗಲೇ ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ, ತನ್ನ ಅಂತಿಮ ತೀರ್ಮಾನವನ್ನು ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಎಎಐ ವರದಿಗಾಗಿ ಕಾಯದೆ, ಮೂರೂ ಜಾಗಗಳ ಆರ್ಥಿಕ ಕಾರ್ಯಸಾಧ್ಯತೆಗಳನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕನಕಪುರ ರಸ್ತೆಯ ಕಗ್ಗಲೀಪುರ – ಬಿಡದಿ ನಡುವಿನ ಪ್ರದೇಶ, ಹಾರೋಹಳ್ಳಿ ಸಮೀಪದ ಜಾಗ, ಮತ್ತು ನೆಲಮಂಗಲದಿಂದ ಕುಣಿಗಲ್ಗೆ ಸಾಗುವ ರಾಷ್ಟ್ರೀಯ ಹೆದ್ದಾರಿ-75ಕ್ಕೆ ಹೊಂದಿಕೊಂಡಿರುವ ಜಾಗವನ್ನು ಸಂಭಾವ್ಯ ಸ್ಥಳಗಳೆಂದು ಗುರುತಿಸಲಾಗಿದೆ.
ಬೆಂಗಳೂರಿನ 2ನೇ ಏರ್ಪೋರ್ಟ್ಗೆ ಜಾಗ ಫಿಕ್ಸ್? ಬಿಡದಿ ಬಳಿ ಹೊಸ ವಿಮಾನ ನಿಲ್ದಾಣ ಸ್ಥಾಪನೆ? ಭೂಸ್ವಾಧೀನ ಪ್ರಕ್ರಿಯೆ ಕೂಡ ಆರಂಭ! ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಎಎಐ ತಾಂತ್ರಿಕ ಅನುಮೋದನೆ ನೀಡಿದ ತಕ್ಷಣವೇ ಯೋಜನೆಯನ್ನು ಜಾಗತಿಕ ಟೆಂಡರ್ಗೆ ವಹಿಸಲು ಆರ್ಥಿಕ ಕಾರ್ಯಸಾಧ್ಯತಾ ವರದಿ ಅತ್ಯಗತ್ಯ.
ಹೀಗಾಗಿ, ಈ ‘ಬ್ಯಾಕ್ಎಂಡ್ ಹೋಂವರ್ಕ್’ ಅನ್ನು ಮೊದಲೇ ಪೂರ್ಣಗೊಳಿಸುವ ಮೂಲಕ ಸಮಯ ಉಳಿತಾಯ ಮಾಡುವುದು ಸರ್ಕಾರದ ಲೆಕ್ಕಾಚಾರವಾಗಿದೆ. ಯೋಜನೆಗೆ ವೇಗ ನೀಡಿದ ಅಂಶಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. 2033ರ ವೇಳೆಗೆ ಎರಡನೇ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಾಲಿ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ 2035ರವರೆಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಅವಕಾಶವಿಲ್ಲ.

ಈಗಿನಿಂದಲೇ ಪ್ರಕ್ರಿಯೆ ಆರಂಭಿಸಿದರೆ, ನಿಷೇಧದ ಅವಧಿ ಮುಗಿಯುತ್ತಿದ್ದಂತೆ ಹೊಸ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ಸಾಧ್ಯವಾಗಲಿದೆ. ಇದೇ ವೇಳೆ, ಬೆಂಗಳೂರು ದಕ್ಷಿಣ ಭಾಗದ ಪ್ರಯಾಣಿಕರನ್ನು ಹಾಗೂ ಕಾರ್ಗೋ ಪ್ರಮಾಣವನ್ನು ಗುರಿಯಾಗಿಸಿಕೊಂಡು ತಮಿಳುನಾಡು ಸರ್ಕಾರವು ಗಡಿಭಾಗದ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಆಸಕ್ತಿ ತೋರಿದೆ. ಇದು ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದ ಏರ್ಪೋರ್ಟ್ ಆಗಿರಲಿದೆ. ಈ ಸ್ಪರ್ಧಾತ್ಮಕ ಬೆಳವಣಿಗೆಯು ರಾಜ್ಯ ಸರ್ಕಾರ ತನ್ನ ಯೋಜನೆಯನ್ನು ಚುರುಕುಗೊಳಿಸಲು ಮತ್ತೊಂದು ಕಾರಣವಾಗಿದೆ”

Leave a comment