ಮಿಂಟೋ ಆಸ್ಪತ್ರೆಯಲ್ಲಿ 25 ಹಾಸಿಗೆಗಳು ಮೀಸಲು, 24/7 ತುರ್ತು ಚಿಕಿತ್ಸಾ ಘಟಕ ಮಕ್ಕಳ ಸುರಕ್ಷತೆಗೆ ಆದ್ಯತೆ, ಪೋಷಕರ ಮೇಲ್ವಿಚಾರಣೆ ಕಡ್ಡಾಯವೆಂದು ತಜ್ಞರ ಸಲಹೆ ಕಣ್ಣಿಗೆ ಗಾಯವಾದರೆ ಉಜ್ಜಬೇಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪಟಾಕಿ ಸಿಡಿಸುವ ವೇಳೆ ಹತ್ತಿ ಬಟ್ಟೆ ಧರಿಸಿ, ಸಮೀಪದಲ್ಲಿ ನೀರು ಇಟ್ಟುಕೊಳ್ಳಿ ದೀಪಾವಳಿ ಸಂಭ್ರಮದ ವೇಳೇ ಪಟಾಕಿ ಅವಘಡಗಳೂ ಸಂಭವಿಸುವುದು ಸಾಮಾನ್ಯ. ಇದಕ್ಕಾಗಿ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಆದರೆ ಈ ಸಂಭ್ರಮದ ನಡುವೆ ಪಟಾಕಿ ಸಿಡಿತದಿಂದ ಉಂಟಾಗಬಹುದಾದ ಅವಘಡಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯ. ಯಾವುದೇ ಅಹಿತಕರ ಘಟನೆ ನಡೆದರೂ ತಕ್ಷಣ ಸ್ಪಂದಿಸಲು ಬೆಂಗಳೂರು ನಗರದ ಪ್ರಮುಖ ಆಸ್ಪತ್ರೆಗಳು ಸನ್ನದ್ಧವಾಗಿದ್ದು, 24/7 ಸೇವೆಗೆ ಸಜ್ಜಾಗಿವೆ.

ಪಟಾಕಿ ಅವಘಡಗಳಲ್ಲಿ ಕಣ್ಣಿನ ಗಾಯಗಳೇ ಹೆಚ್ಚಾಗಿ ಸಂಭವಿಸುವುದರಿಂದ, ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳ ಚಿಕಿತ್ಸೆಗಾಗಿ ಒಟ್ಟು 25 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ 10 ಪುರುಷರಿಗೆ, 10 ಮಹಿಳೆಯರಿಗೆ ಮತ್ತು 5 ಮಕ್ಕಳಿಗೆ ಮೀಸಲಿರಿಸಲಾಗಿದೆ. ಹಬ್ಬದ ದಿನಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ನಿರಂತರವಾಗಿ ಕರ್ತವ್ಯದಲ್ಲಿರುತ್ತಾರೆ.”

Leave a comment