ನಿಮ್ಮ ಕೈನಲ್ಲಿ ಆರ್.ಎಸ್ ಎಸ್ ಬ್ಯಾನ್ ಮಾಡೋಕೆ ಆಗುತ್ತಾ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿ

55

ಮೈಸೂರು : ಸರ್ಕಾರಿ ಕಚೇರಿ ಆವರಣದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳ ಬ್ಯಾನ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಒಂದು ಹುಚ್ಚು ಚಾಳಿ ಇದೆ. ಪ್ರಿಯಾಂಕ್ ಖರ್ಗೆ ಎಮ್ಮೆ ಮೇಲೆ ಮಳೆ ಬಂದಂತೆ ಆಡ್ತಾರೆ. ಪ್ರಿಯಾಂಕ್ ಖರ್ಗೆಗೆ ಪ್ರಚಾರದ ಗೀಳು ಜಾಸ್ತಿಯಾಗಿದೆ. ನಾನೊಬ್ಬ ಮಂತ್ರಿ ಎಲ್ಲವನ್ನೂ ಪ್ರಸಾರ ಮಾಡ್ತಾರೆ ಅಂತ ಏನು ಬೇಕಾದ್ರೂ ಮಾತನಾಡುತ್ತಾರೆ.

ಕೂಗು ಮಾರಿ ಆಗಿದ್ದಾರೆ. ನೆಹರೂ ಕೈನಲ್ಲಿ ಆರ್.ಎಸ್.ಎಸ್ ಬ್ಯಾನ್ ಮಾಡೋಕೆ ಆಗಲಿಲ್ಲ. ನೆಹರು ಮಗಳು ಇಂದಿರಾಗಾಂಧಿ ಕೈನಲ್ಲಿ ಆಗಲಿಲ್ಲ‌. ರಾಜೀವ್ ಗಾಂಧಿ ಕೈನಲ್ಲಿ ಆಗಲಿಲ್ಲ. ನಿಮ್ಮ ಕೈನಲ್ಲಿ ಆರ್.ಎಸ್ ಎಸ್ ಬ್ಯಾನ್ ಮಾಡೋಕೆ ಆಗುತ್ತಾ ಎಂದು ವಾಗ್ದಾಳಿ ನಡೆಸಿದರು.

ಕೂಗು ಮಾರಿ ಖರ್ಗೆ ನೀವು, ಫೈಲ್ಸ್ ಪ್ರಿಯಾಂಕ್ ಖರ್ಗೆ ಅಂತ ಅಶ್ವಥ್ ನಾರಾಯಣ ಹೇಳಿದ್ದು, ಸುಮ್ಮನೆ ಹೇಳಿಲ್ಲ, ನಿಮ್ಮದು ಅದೇ ಗುಣ. ಅಧಿಕಾರಕ್ಕೆ ಬರುವ ಮೊದಲು ಬಿಟ್ ಕಾಯಿನ್ ಹಗರಣ ಬಗ್ಗೆ ಏನೆಲ್ಲಾ ಮಾತನಾಡಿದರು. ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ನೀವು ಕೂಡ ಪಿಯುಸಿ ಫೇಲ್ ಆಗಿರೋರು‌. ನಿಮ್ಮ ಜಿಲ್ಲೆ ಎಸ್.ಎಸ್.ಎಲ್.ಸಿ ರಿಸಲ್ಟ್ ನಲ್ಲಿ ಯಾವಾಗಲೂ ಕೊನೆಯಲ್ಲಿ ಇರುತ್ತದೆ. ಸಚಿವರಾಗಿ ನಿಮ್ಮ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಸಾರ್ ಎಂದು ಪ್ರಶ್ನಿಸಿದರು.

ಟೈಮ್‌ ಬಂತು.. ಸಿದ್ದರಾಮಯ್ಯ ಅಸಲಿ ಆಟ ಶುರು, ಡಿಕೆ ಶಿವಕುಮಾರ್‌ ಸುತ್ತ ಚಕ್ರವ್ಯೂಹ! ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೀವು ಏನು ಬದಲಾವಣೆ ತಂದಿದ್ದೀರಾ? ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೀವು ಏನು ಬದಲಾವಣೆ ತಂದಿದ್ದೀರಾ? ಜಾಹೀರಾತು ನೀಡಿ ದೊಡ್ಡ ಮನುಷ್ಯ ಅಂತ ಬಿಂಬಿಸಿಕೊಳ್ಳುತ್ತೀರಾ? ನೀವು ಹಾಗೂ ಆ ಹಳಸೋಗಿರೋ ಲಾಡು ಇಬ್ಬರು ಯಾವಾಗ್ಲೂ ಬಾಯಿ ಬಡಿದುಕೊಳ್ಳುತ್ತೀರಾ. ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡ್ತೀರಾ‌. ಲಾಡು, ಪ್ರಿಯಾಂಕ್, ಡ್ರೋನ್ ಪ್ರದೀಪ್, ಇಲ್ಲೊಬ್ಬ ಮುಠ್ಠಾಳ ಕೂಗೂ ಮಾರಿ ಎಲ್ಲರೂ ದಿನನಿತ್ಯ ಮಾತಾಡೋದು. ಆರ್.ಎಸ್.ಎಸ್ ಬ್ಯಾನ್ ಮಾಡೋಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

ನಿಮ್ಮ ತಂದೆಯೇ ಸಚಿವರಾಗಿದ್ದಾಗ ಕಂಬಾಲಪಲ್ಲಿಯಲ್ಲಿ ಏನಾಯ್ತು ಕೇಳಿ. ಸರ್ಕಾರ ಬಂದು ಎರಡೂವರೆ ವರ್ಷ ಆಯ್ತು‌. ಏನು ಸಾಧನೆ ಮಾಡಿದ್ದೀರಾ? ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನಲ್ಲಿ ಏನು ಆಗಿಲ್ಲ. ಐಟಿ ಬಿಟಿಯಲ್ಲಿನ ಸಾಧನೆ ಶೂನ್ಯ‌. ಪ್ರಿಯಾಂಕ್ ಖರ್ಗೆ ಮೋಸ್ಟ್ ಇನ್ಫ್ಲುಯೆನ್ಸ್ ವರ್ಷನ್ ಅಂತೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.

ಟೈಮ್‌ ಬಂತು.. ಸಿದ್ದರಾಮಯ್ಯ ಅಸಲಿ ಆಟ; ಡಿಕೆಶಿ ಸುತ್ತ ಚಕ್ರವ್ಯೂಹ; ಸಿಎಂ ಕುರ್ಚಿ ಉಳಿಸಿಕೊಳ್ಳಲು ಗೇಮ್‌! ಗುಂಡಿ ಮುಚ್ಚಲು ನಿಮ್ಮ ಕೈನಲ್ಲಿ ಆಗಲಿಲ್ಲ ಗುಂಡಿ ಮುಚ್ಚಲು ನಿಮ್ಮ ಕೈನಲ್ಲಿ ಆಗಲಿಲ್ಲ. ಲಾಡುಗೆ ಮೈನಿಂಗ್ ನಲ್ಲಿ ದುಡ್ಡು ಹೊಡೆಯೋದು ಅಷ್ಟೇ ಕೆಲಸ. ಸಿದ್ದರಾಮಯ್ಯ ಅವರೇ ಇನ್ನಾದರೂ ಇವರುಗಳ ಬಾಯಿ ಮುಚ್ಚಿಸಿ. ಪ್ರಿಯಾಂಕ್ ಖರ್ಗೆಗೆ ವಿಶೇಷವಾದ ರೋಗವಿದೆ.

ಅದು ಅವರ ಎಜುಕೇಶನ್‌. ಅದು ಅವರಿಗೆ ಈ ರೀತಿ ಮಾತನಾಡುವಂತೆ ಮಾಡಿದೆ. ಪ್ರಿಯಾಂಕ್ ಖರ್ಗೆ ಅವರೇ ಸಂವಿಧಾನ ಓದಿಕೊಳ್ಳಿ. ಧ್ವಜ ಸಂಹಿತೆ ಬಗ್ಗೆ ತಿಳಿದುಕೊಳ್ಳಿ. ಹೇಳಿಕೊಳ್ಳಲು ಒಂದು ಒಳ್ಳೆಯ ಕೆಲಸ ಮಾಡಿಲ್ಲ‌. ಅದಕ್ಕಾಗಿ ಈ ರೀತಿ ಹುಚ್ಚು ಹೇಳಿಕೆ ಕೊಡ್ತಾರೆ. ಪ್ರದೀಪ್ ಈಶ್ವರ್, ಎಂ ಲಕ್ಷ್ಮಣ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಮೈಸೂರಿನಲ್ಲಿ ವಾಗ್ದಾಳಿ‌ ಮುಂದುವರೆಸಿದರು.”

Leave a comment

Leave a Reply

Your email address will not be published. Required fields are marked *

Related Articles

ಜೂನ್ 27 ರಂದು ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ :: ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ಬೆಂಗಳೂರು: ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಜೂನ್ 27 ರಂದು...

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಪ್ರಾರಂಭಿಸಿದ ::ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಆಡಳಿತ ಯಂತ್ರಕ್ಕೆ ಚುರುಕು...

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಅಧಿಕಾರಿಗಳಿಗೆ ಸೂಚನೆ ನೀಡಿದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಇಂದು ವಿಧಾನಸೌಧದಲ್ಲಿ...

ಸಂಪುಟ ರಚನೆಯ ಕಸರತ್ತು ದೆಹಲಿಗೆ ತೆರಳಿದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ನವದೆಹಲಿ: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದು, ಸೋಮವಾರ ದೆಹಲಿಗೆ ತೆರಳಿ...