ಜನರ ಅವಶ್ಯಕತೆ ಪೂರೈಸುವುದಕ್ಕೆ ಬಿಎಂಟಿಸಿ ವಿಫಲ ಖಾಸಗಿ ಬಸ್‌ಗಳಿಗೆ ಬೇಡಿಕೆ

42

ಬಿಎಂಟಿಸಿಯನ್ನು “ವಿಫಲ” ಸಂಸ್ಥೆ ಎಂದು ಕರೆದ ಮೋಹನ್‌ದಾಸ್ ಪೈ ಖಾಸಗಿ ಸಾರಿಗೆದಾರರಿಗೆ ನಗರದಲ್ಲಿ ಕಾರ್ಯಾಚರಿಸಲು ಅವಕಾಶ ಇಲ್ಲ ಎಂಬ 1970ರ ದಶಕದ ಕಾಯ್ದೆ ಇನ್ನೂ ಜಾರಿಯಿದೆ ಸಾರ್ವಜನಿಕರ ಹಿತಾಸಕ್ತಿಗಿಂತ ಖಾಸಗಿ ಕಂಪನಿಗಳ ಲಾಭಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳ ಓಡಾಟ,

ಬೆಂಗಳೂರು: ನಗರದ ಟ್ರಾಫಿಕ್ ಜಾಂ ಒಂದುಕಡೆಯಾದರೆ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಹೆಚ್ಚು ಬಳಸಬೇಕೆಂಬುದು ಇನ್ನೊಂದೆಡೆಯಲ್ಲಿ ಕೇಳಿಬರುತ್ತಿರುವ ಕೂಗು. ಇದಕ್ಕೆ ತಕ್ಕಂತೆ ಜನರ ಅವಶ್ಯಕತೆ ಪೂರೈಸುವುದಕ್ಕೆ ಬಿಎಂಟಿಸಿ ವಿಫಲ ಆಗಿದೆ, ಹೀಗಾಗಿ ನಿಯಮ ಸಡಿಲಿಸಿ ಖಾಸಗಿ ಬಸ್‌ಗಳಿಗೂ ಅವಕಾಶ ಕೊಡಬೇಕು, ಬಿಎಂಟಿಸಿಯ ಏಕಸ್ವಾಮ್ಯವನ್ನು ನಿಲ್ಲಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಹೌದು ಬೆಂಗಳೂರಲ್ಲಿ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ನಿಟ್ಟಿನಲ್ಲಿ, ಖಾಸಗಿ ಕಂಪನಿಗಳಿಗೆ ನಗರದಲ್ಲಿ ಬಸ್ ಸೇವೆಗಳನ್ನು ನಡೆಸಲು ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ನಗರ ತಜ್ಞರು, ಉದ್ಯಮ ನಾಯಕರು ಮತ್ತು ರಾಜಕಾರಣಿಗಳು ಸಹ ಬೆಂಬಲ ಸೂಚಿಸಿದ್ದಾರೆ.

ಶುಕ್ರವಾರ ನಡೆದ ಮೊಬಿಲಿಟಿ ಸಿಂಪೋಸಿಯಂನಲ್ಲಿ, ಮಾಜಿ ಇನ್ಫೋಸಿಸ್ ಸಿಎಫ್‌ಒ ಮೋಹನ್‌ದಾಸ್ ಪೈ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಏಕಸ್ವಾಮ್ಯವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಬಿಎಂಟಿಸಿಯನ್ನು “ವಿಫಲ” ಸಂಸ್ಥೆ ಎಂದು ಕರೆದ ಅವರು, ಜನಪ್ರಿಯ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಬಸ್ಸುಗಳನ್ನು ನಡೆಸಲು ಅವಕಾಶ ನೀಡಿದರೆ, ರಸ್ತೆಗಳಲ್ಲಿ ಹೆಚ್ಚಿನ ಸಾರ್ವಜನಿಕ ಸಾರಿಗೆ ವಾಹನಗಳು ಬಂದು ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ ಎಂದು ಅಭಿಪ್ರಾಯಪಟ್ಟರು.  

“ಬೆಂಗಳೂರಿನಲ್ಲಿ ಬಿಎಂಟಿಸಿ ಸಂಪೂರ್ಣವಾಗಿ ವಿಫಲವಾಗಿದೆ. ಅವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಈ ಸಂಸ್ಥೆಯ ಕಾರ್ಯವೈಖರಿಯನ್ನು ಸರ್ಕಾರ ಮರುಪರಿಶೀಲನೆ ಮಾಡಬೇಕಾದ ಸಮಯ ಬಂದಿದೆ. ನಾಗರಿಕರಿಗೆ ಸಾಕಷ್ಟು ಸಾರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಅವರ ಕೆಲಸ ಸೇವಾ ಪೂರೈಕೆದಾರರಾಗಿ ಕಂಪನಿ ನಡೆಸುವುದಲ್ಲ. ಅದು ಹಳೆಯ ಪದ್ಧತಿ.

ಈ ವ್ಯವಸ್ಥೆಯಿಂದ ಹೊರಬಂದು, ಖಾಸಗಿ ನಿರ್ವಾಹಕರಿಗೆ ಈ ಕ್ಷೇತ್ರವನ್ನು ತೆರೆಯಬೇಕು” ಎಂದರು. ಸರ್ಕಾರವು ಬಿಎಂಟಿಸಿ ಯನ್ನು “ಉಚಿತ ಸೇವೆಗಳ ಸಾಮಾಜಿಕ ಕಾರ್ಯಕ್ರಮಕ್ಕಾಗಿ” ಮುಂದುವರಿಸಬಹುದು ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಗರ ತಜ್ಞರಾದ ಆರ್.ಕೆ. ಮಿಶ್ರ ಕೂಡ ಪೈ ಅವರ ಸಲಹೆಗಳಿಗೆ ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ಎಲ್.ಎಸ್. ತೇಜಸ್ವಿ ಸೂರ್ಯ ಕೂಡ ಇದೇ ಮಹತ್ವವನ್ನು ಒತ್ತಿ ಹೇಳಿದರು.

“ಕಳೆದ 15 ವರ್ಷಗಳಲ್ಲಿ, ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದರೂ, ಬಿಎಂಟಿಸಿ ಯ ಬಸ್ಸುಗಳ ಸಂಖ್ಯೆ ಬಹುತೇಕ ಸ್ಥಗಿತಗೊಂಡಿದೆ. ನಗರದ ಕಿರಿದಾದ ರಸ್ತೆಗಳಿಗೆ ಸಣ್ಣ ಬಸ್ಸುಗಳು ಬೇಕಾಗುತ್ತವೆ. ಆದರೆ, ಖಾಸಗಿ ಸಾರಿಗೆದಾರರಿಗೆ ನಗರದಲ್ಲಿ ಕಾರ್ಯಾಚರಿಸಲು ಅವಕಾಶ ಇಲ್ಲ ಎಂಬ 1970ರ ದಶಕದ ಕಾಯ್ದೆ ಇನ್ನೂ ಜಾರಿಯಿದೆ. ಈ ಸಮಾಜವಾದಿ ಅವಶೇಷವು ಭಾರತದ ಆರ್ಥಿಕತೆಯನ್ನು ನಿಧಾನಗೊಳಿಸುವುದಲ್ಲದೆ, ನಮ್ಮ ನಗರ ಸಾರಿಗೆ ಆಯ್ಕೆಗಳನ್ನು ಕೂಡ ನಿರ್ಬಂಧಿಸುತ್ತಿದೆ” ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಸರ್ಕಾರದ ವಾದ ಏನು? ಇತ್ತ, ಖಾಸಗಿ ವಲಯಕ್ಕೆ ಬಸ್ ಸೇವೆಗಳನ್ನು ತೆರೆಯುವ ಬಗ್ಗೆ ಸಲಹೆ ನೀಡುತ್ತಿರುವವರು ಸಾರ್ವಜನಿಕರ ಹಿತಾಸಕ್ತಿಗಿಂತ ಖಾಸಗಿ ಕಂಪನಿಗಳ ಲಾಭಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು. “ಈ ಜನರು ಖಾಸಗಿ ಕಂಪನಿಗಳ ಪರವಾಗಿದ್ದಾರೆ. ಅವರು ಲಾಭದ ಬಗ್ಗೆ ಯೋಚಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ಅಭಿಪ್ರಾಯಗಳೊಂದಿಗೆ ಒಪ್ಪುವುದಿಲ್ಲ” ಎಂದು ಅವರು ಹೇಳಿದರು. ಸುಮಾರು 7,000 ಬಸ್ಸುಗಳೊಂದಿಗೆ, ಪ್ರತಿದಿನ ಸುಮಾರು 48 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಬಿಎಂಟಿಸಿ ನಗರದ ಸಾರ್ವಜನಿಕ ಸಾರಿಗೆಯ ಬೆನ್ನೆಲುಬಾಗಿದೆ ಎಂದು ಹೇಳಿದ್ದಾರೆ

ಬಿಎಂಟಿಸಿಯ ಬಗ್ಗೆ ಚಿಂತಿಸುವ ಬದಲು, ಬಿಜೆಪಿ ರಾಜಕಾರಣಿಗಳು ತಮ್ಮ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್ಸುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಬೇಕು. ಮಹಾರಾಷ್ಟ್ರ ಹೊರತುಪಡಿಸಿ, ಬಹುತೇಕ ಎಲ್ಲಾ ಬಿಜೆಪಿ ರಾಜ್ಯಗಳಲ್ಲಿ ಸಾರ್ವಜನಿಕ ಬಸ್ ವ್ಯವಸ್ಥೆಗಳು ವಿಫಲವಾಗಿವೆ. ಅವು ಬಿಎಂಟಿಸಿಯ ಯ ಹತ್ತಿರಕ್ಕೂ ಬರುವುದಿಲ್ಲ” ಎಂದು ಅವರು ಹೇಳಿದ್ದಾರೆ. ಖಾಸಗಿ ಕಂಪನಿಗಳು ಬಸ್ ಸೇವೆಗಳನ್ನು ನಡೆಸಲು ಅವಕಾಶ ನೀಡಿದರೆ, ಅವು ಲಾಭದ ಮೇಲೆ ಮಾತ್ರ ಗಮನಹರಿಸುತ್ತವೆ ಮತ್ತು ಸಾರ್ವಜನಿಕರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತವೆ ಎಂಬುದು ಸಾರಿಗೆ ಸಚಿವರ ವಾದವಾಗಿದೆ.

ಇತಿಹಾಸದಲ್ಲೇ ಅತಿದೊಡ್ಡ ಟ್ರಾಫಿಕ್ ಜಾಮ್; 65 ಕಿ.ಮೀ. ಉದ್ದ ವಾಹನಗಳ ಸಾಲು; 4 ದಿನದಿಂದ ರಸ್ತೆಯಲ್ಲೇ ಜಾಗರಣೆ! ಖಾಸಗಿ ಕಂಪನಿಗಳಿಗೆ ಅವಕಾಶ ನೀಡಬೇಕೆಂದು ವಾದಿಸುವವರು, ಬಿಎಂಟಿಸಿ ಯ ಏಕಸ್ವಾಮ್ಯದಿಂದಾಗಿ ಸೇವೆಗಳ ಗುಣಮಟ್ಟ ಕುಗ್ಗಿದೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚಾಗಿಲ್ಲ ಎಂದು ಹೇಳುತ್ತಿದ್ದಾರೆ.

ನಗರದ ಕಿರಿದಾದ ರಸ್ತೆಗಳಿಗೆ ಸಣ್ಣ ಬಸ್ಸುಗಳು ಸೂಕ್ತವಾಗುತ್ತವೆ ಎಂಬುದು ಅವರ ವಾದ. ಆದರೆ, ಹಳೆಯ ಕಾನೂನುಗಳು ಖಾಸಗಿ ಕಂಪನಿಗಳಿಗೆ ಅಡ್ಡಿಯಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕಾನೂನುಗಳನ್ನು ಬದಲಾಯಿಸಿ, ಖಾಸಗಿ ವಲಯವನ್ನು ಪ್ರವೇಶಿಸಲು ಅನುಮತಿಸಿದರೆ, ನಗರದ ಸಾರಿಗೆ ವ್ಯವಸ್ಥೆ ಸುಧಾರಿಸಬಹುದು ಎಂದು ಅವರು ನಂಬಿದ್ದಾರೆ.

ಇದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಒಟ್ಟಾರೆಯಾಗಿ, ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಭವಿಷ್ಯದ ಬಗ್ಗೆ ಎರಡು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದು ಕಡೆ, ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದರೆ ಸೇವೆಗಳು ಸುಧಾರಿಸುತ್ತವೆ ಎಂಬುದು, ಇನ್ನೊಂದು ಕಡೆ, ಖಾಸಗಿ ಕಂಪನಿಗಳು ಲಾಭಕ್ಕೆ ಮಾತ್ರ ಆದ್ಯತೆ ನೀಡುತ್ತವೆ ಎಂಬುದು.

ಈ ಚರ್ಚೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ನಿರೀಕ್ಷೆಯೂ ಇದೆ. ಬೆಂಗಳೂರು: ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ (BMTC) ಏಕಸ್ವಾಮ್ಯವನ್ನು ಕೊನೆಗೊಳಿಸಿ, ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಕೂಗು ಹೆಚ್ಚಾಗಿದೆ. ನಗರದ ಸಂಚಾರ ದಟ್ಟಣೆ ಮತ್ತು ಸಾರಿಗೆ ಸಮಸ್ಯೆಗಳಿಗೆ ಪರಿಹಾರವಾಗಿ ಈ ಪ್ರಸ್ತಾವನೆ ಮುಂದಿಡಲಾಗಿದೆ. ಆರ್ಥಿಕ ತಜ್ಞರು ಮತ್ತು ನಗರ ಯೋಜಕರು ಕೂಡ ಈ ಬದಲಾವಣೆಯನ್ನು ಬೆಂಬಲಿಸಿದ್ದು, ಇದು ಸಾರಿಗೆ ವ್ಯವಸ್ಥೆಯಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇದೆ ವಾಯು ಮಾಲಿನ್ಯ ಸಮಸ್ಯೆ

ಬೆಂಗಳೂರು : ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇದೆ ವಾಯು ಮಾಲಿನ್ಯ ಸಮಸ್ಯೆ ಅಂತರ್ಜಾಲ ಹಾಗೂ ಪತ್ರಿಕಾ...