ಹೊಸ ವಿಂಗಡಣೆ ವಿವಾದ ವಿವಿಧ ಪಾಲಿಕೆಗಳ ನಡುವೆ ಹಂಚಿ ಹೋಗಲಿರುವ 5 ಅಸೆಂಬ್ಲಿ ಕ್ಷೇತ್ರಗಳು

24

ನಗರದ ಐದು ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಗಳು ವಿವಿಧ ವಾರ್ಡ್ ಗಳಿಗೆ ಹಂಚಿಹೋಗಲಿದೆ. ವಾರ್ಡ್ ವಿಂಗಡಣೆ ಕರಡು ನಕ್ಷೆ, ಸದ್ಯ ಬೆಂಗಳೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಕೆಲವೊಂದು ವಾರ್ಡುಗಳು ಬೆಂಗಳೂರು ಉತ್ತರದ ವ್ಯಾಪ್ತಿಯಲ್ಲಿದ್ದರೆ, ಕೆಲವೊಂದು ಪಶ್ಚಿಮ ವ್ಯಾಪ್ತಿಗೆ ಬರುತ್ತದೆ.

ಹಲವು ಕಾರ್ಪೋರೇಶನ್ ನಡುವೆ ಹಂಚಿ ಹೋಗಲಿರುವ ಐದು ವಿಧಾನಸಭಾ ಕ್ಷೇತ್ರಗಳು ನಗರಾಭಿವೃದ್ದಿ ಇಲಾಖೆಯಿಂದ ಕರಡು ನಕ್ಷೆ ಬಿಡುಗಡೆ, ಹೊಸ ಚರ್ಚೆಗೆ ನಾಂದಿ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾದ ಹೊಸ ವಿಂಗಡಣೆ ವಿವಾದ ವಿವಿಧ ಪಾಲಿಕೆಗಳ ನಡುವೆ ಹಂಚಿ ಹೋಗಲಿರುವ ಈ 5 ಅಸೆಂಬ್ಲಿ ಕ್ಷೇತ್ರಗಳು

ಬೆಂಗಳೂರು : ಬಿಬಿಎಂಪಿ ಹೋಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ  ಅಸ್ತಿತ್ವಕ್ಕೆ ಬಂದಿರುವುದು ಗೊತ್ತಿರುವ ವಿಚಾರ. ಈ ಹಿನ್ನಲೆಯಲ್ಲಿ, ವಾರ್ಡ್ ವಿಂಗಡಣೆ ಕೆಲಸ ನಡೆಯುತ್ತಿದೆ. ನಗರ ಅಭಿವೃದ್ದಿ ಇಲಾಖೆ ಕರಡು ನಕ್ಷೆ ಸಿದ್ದಪಡಿಸಿದೆ. ಈ ಕರಡು ನಕ್ಷೆ ಸದ್ಯ ಚರ್ಚೆ ಮತ್ತು ಬೆಂಗಳೂರಿನ ಕೆಲವು ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಯಾಕೆಂದರೆ, ರಾಜಧಾನಿ ವ್ಯಾಪ್ತಿಯ 28 ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಐದು ವಿಧಾನಸಭಾ ಕ್ಷೇತ್ರಗಳು, ವಿವಿಧ ಕಾರ್ಪೋರೇಶನ್ ಲಿಮಿಟ್ ನಲ್ಲಿ ವಿಂಗಡಣೆಯಾಗಲಿದೆ.”

ಈ ಪೈಕಿ, ದಾಸರಹಳ್ಳಿ, ಪದ್ಮನಾಭ ನಗರ, ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯು ವಿವಿಧ ಪಾಲಿಕೆಗಳಲ್ಲಿ ಹಂಚಿ ಹೋಗಲಿದೆ. ಇದು, ಸ್ವಾಭಾವಿಕವಾಗಿ ಆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ, 28 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.

ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ( ಮಾರ್ಚ್ 13, 2025), ಕೆಲವು ಬದಲಾವಣೆಗಳೊಂದಿಗೆ ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಏಪ್ರಿಲ್ 23, 2025 ರಂದು ರಾಜ್ಯಪಾಲರು ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ, 2024 ಕ್ಕೆ ಅನುಮೋದನೆಯನ್ನು ನೀಡಿದ್ದರು. ಈ ಕಾಯ್ದೆಯನ್ನು ಏಪ್ರಿಲ್ 24, 2025 ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಹೊಸ ಕರಡು ನಕ್ಷೆಯ ಪ್ರಕಾರ, ಪದ್ಮನಾಭ ನಗರದ ಆರು ವಾರ್ಡ್ ಗಳು ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಗೆ ಬರಲಿದೆ. ಎಂಟು ವಾರ್ಡ್ ಗಳು ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಬರಲಿದೆ.

ದಾಸರಹಳ್ಳಿ ಕ್ಷೇತ್ರದ ಎಂಟು ವಾರ್ಡ್ ಗಳು ಬೆಂಗಳೂರು ಉತ್ತರ, ಉಳಿದ ಹತ್ತು ವಾರ್ಡ್ ಗಳು ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಬರಲಿದೆ.

ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರವು ಮೂರು ನಿಗಮಗಳ ನಡುವೆ ಹಂಚಿಹೋಗಿರುವುದು ಗಮನಿಸಬೇಕಾದ ವಿಚಾರ. ಇಲ್ಲಿ ಹದಿಮೂರು ವಾರ್ಡ್‌ಗಳು ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿದೆ. ಐದು ವಾರ್ಡ್‌ಗಳು ಬೆಂಗಳೂರು ಉತ್ತರ ಮತ್ತು ಒಂದು ವಾರ್ಡ್ ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಗೆ ಸೇರಿಕೊಳ್ಳಲಿದೆ.

ಮಹದೇವಪುರ ಕ್ಷೇತ್ರದ ಹೆಚ್ಚಿನ ಭಾಗವು ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಆದರೆ, ಒಂದು ವಾರ್ಡ್, ಬೆಂಗಳೂರು ದಕ್ಷಿಣ ಪಾಲಿಕೆಗೆ ವರ್ಗಾಯಿಸಲಾಗಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಇದೇ ಸಮಸ್ಯೆ ಎದುರಾಗಿದೆ. ಯಶವಂತಪುರ ಕ್ಷೇತ್ರವು ಬೆಂಗಳೂರು ಪಶ್ಚಿಮದ ವ್ಯಾಪ್ತಿಗೆ ಬರುತ್ತದೆ. ಆದರೆ, ಇಲ್ಲಿನ ಒಂದು ವಾರ್ಡ್, ಬೆಂಗಳೂರು ದಕ್ಷಿಣ ಪಾಲಿಕೆಗೆ ಸೇರಿಸಲಾಗಿದೆ.

ಕೆ.ಆರ್. ಪುರಂ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ 27 ವಾರ್ಡ್‌ ಗಳಿವೆ. ಇದು, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಅತಿ ಹೆಚ್ಚು ವಾರ್ಡ್‌ ಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಇದು ಬೆಂಗಳೂರು ಪೂರ್ವದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಒಳಗೊಂಡಿದೆ. ಯಲಹಂಕ ಕ್ಷೇತ್ರವು ಏಳು ವಾರ್ಡ್‌ ಗಳನ್ನು ಹೊಂದಿದೆ. ಇದು ಅತಿ ಕಡಿಮೆ ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರವಾಗಿದೆ.

ಗ್ರೇಟರ್‌ ಬೆಂಗಳೂರು ಪ್ರದೇಶಕ್ಕೆ ಯೋಜನಾ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುವುದು. ಎಲ್ಲಾ 5 ನಗರ ಪಾಲಿಕೆಗಳಿಗಾಗಿ ಕಾಮನ್‌ ಕೇಡರ್‌ ನಿರ್ವಹಿಸುವುದು. ಇದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಜವಾಬ್ದಾರಿಯಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...