ಪಿಓಕೆ ಮರುವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ ; ರಾಜನಾಥ ಸಿಂಗ್‌ ಭರವಸೆಯ ನುಡಿ

29

“ಒಂದಲ್ಲ ಒಂದು ದಿನ ಪಾಕ್‌ ಆಕ್ರಮಿತ ಕಾಶ್ಮೀರ ನಾನು ಭಾರತ ಎಂದು ಘೋಷಿಸಿಕೊಳ್ಳುವ ದಿನ ಬಂದೇ ಬರುತ್ತದೆ” ಇದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಭರವಸೆಯ ನುಡಿಗಳು. ಮೊರಾಕ್ಕೊದಲ್ಲಿ ಅನಿವಾಸಿ ಭಾರತೀಯ ಸಮುದಾಯದವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪಿಒಕೆ ಮರುವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ, ಅದು ತಾನಾಗಿಯೇ ಭಾರತದ ಅಂಗವಾಗಲಿದೆ” ಎಂದು ಭವಿಷ್ಯ ನುಡಿದರು. ಶಾಂತಿ ಮಾರ್ಗದಲ್ಲೇ ಪಿಒಕೆ ಭಾರತದ ಮರುವಶವಾಗಲಿದೆ ಎಂಬ ರಾಜನಾಥ್‌ ಸಿಂಗ್‌ ಹೇಳಿಕೆ ಇದೀಗ ಗಮನ ಸೆಳೆದಿದೆ.

ಪಿಒಕೆ ತಾನಾಗಿಯೇ ಭಾರತದ ಒಕ್ಕೂಟವನ್ನು ಸೇರಿಕೊಳ್ಳಲಿದೆ ಎಂದ ರಾಜನಾಥ್‌ ಸಿಂಗ್‌. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎರಡು ದಿನಗಳ ಮೊರೊಕ್ಕೊ ಪ್ರವಾಸ. ಪಿಒಕೆ ಒಂದು ದಿನ ʻನಾನು ಭಾರತʼ ಎಂದು ಘೋಷಿಸಿಕೊಳ್ಳಲಿದೆ ಎಂದ ರಾಜನಾಥ್‌ ಸಿಂಗ್.  “ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೇಲೆ, ಭಾರತವು ಶಾಂತಿಯುತವಾಗಿ ಹಿಡಿತ ಸಾಧಿಸಬಹುದು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊರಾಕ್ಕೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಜನರು ಪಾಕ್‌ ಆಡಳಿತದಿಂದ ವಿಮೋಚನೆ ಬಯಸಿದ್ದಾರೆ ಎಂದು ಅಭಿಪ್ರಾಯಪಟ್ಟರು. “ಮುಂದೊಂದು ದಿನ ಪಿಒಕೆ ʻನಾನು ಭಾರತʼ ಎಂದು ಹೇಳುವ ದಿನಗಳು ಬಂದೇ ಬರುತ್ತವೆ. ಅಲ್ಲಿನ ಜನ ಭಾರತದೊಂದಿಗೆ ಸೇರಲು ಕಾತರದಿಂದ ಕಾಯುತ್ತಿದ್ದಾರೆ. ಪಿಒಕೆ ವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ, ಬದಲಿಗೆ ಶಾಂತಿ ಮಾರ್ಗದಲ್ಲೇ ಆ ಪ್ರದೇಶ ತಾನಾಗಿಯೇ ಭಾರತವನ್ನು ಸೇರಿಕೊಳ್ಳುತ್ತದೆ” ಎಂದು ರಾಜನಾಥ್‌ ಸಿಂಗ್‌ ಭವಿಷ್ಯ ನುಡಿದಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2016ರಲ್ಲೇ “ಪಿಒಕೆ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ” ಎಂದು ಹೇಳಿದ್ದರು.   

Leave a comment

Leave a Reply

Your email address will not be published. Required fields are marked *

Related Articles

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...

ಬಿಜೆಪಿಯಿಂದ ನಮಗೆ ಅಚ್ಚೆದಿನ್ ಬಂದಿಲ್ಲ ಬೆಂಬಲಿಸಿದ ಎಲ್ಲರಿಗೂ ರಾಮ ಮಂದಿರ ನಿರ್ಮಾಣವಾಗಿ ಲಾಭವಾಗಿದೆ :: ಮೋಹನ್ ಭಾಗವತ್

“ನವದೆಹಲಿ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (UCC) ರೂಪಿಸಬೇಕು ಮತ್ತು ಅದು ವಿಭಜನೆಗೆ...