ಕೊಡವೂರು ವಾರ್ಡ ಸರಕಾರಿ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡನ ತಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ

98

ಕೊಡವೂರು ವಾರ್ಡಿನಲ್ಲಿ ಸಮಗ್ರವಾಗಿ ಅಭಿವೃದ್ದಿ ಆಗಬೇಕು ಕೇವಲ ಕಾಂಕ್ರೀಟ್ ರಸ್ತೆ, ಬಿಲ್ಡಿಂಗ್ ಮಾತ್ರ ಅಲ್ಲ ಬದಲಾಗಿ ಪರಿಸರದ ಜಲ ಸಂರಕ್ಷಣೆ ಪರಿಸರದ ಬಗ್ಗೆ ಜಾಗೃತಿಯಾಗಬೇಕು

ಸರಕಾರದ ನಗರಸಭಾ ಅನುದಾನದ ಮುಖಾಂತರ ಕೊಡವೂರಿನಲ್ಲಿ ಕೆರೆಯ ನಿರ್ಮಾಣಕ್ಕೆ 87 ಲಕ್ಷ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿ ಕೊಡವೂರಿನ ಲಕ್ಷ್ಮೀ ನಗರದ ಸಿರಿಕುಮಾರ ಕೆರೆಗೆ ಮಂಜೂರಾತಿ ಆಗಿತ್ತು.

ಆದರೆ ಅಭಿವೃದ್ಧಿಯನ್ನು ಸಹಿಸಲಾಗದ ಕಾಂಗ್ರೆಸ್ ಮುಖಂಡ ಟೆಂಡರ್ ದಾರರನ್ನು ಕರೆದು ಈ ಸ್ಥಳದಲ್ಲಿ ದೈವ ಸಮಸ್ಯೆಗಳಿದ್ದು ಈ ಸ್ಥಳದಲ್ಲಿ ಕೆಲಸವನ್ನು ಮಾಡಿದರೆ ನಿನಗೂ ಇಲ್ಲಿಯ ಸಮಸ್ಯೆ ಬರುತ್ತದೆ ಎಂದು ಹೆದರಿಸಿ ಕೆಲಸವನ್ನು ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್ ಮುಖಂಡ ಮಾಡಿದ್ದಾನೆಎನ್ನುವ ಆರೋಪ ಸ್ಥಳೀಯರದ್ದು.

ಸರಕಾರಿ ಜಾಗದಲ್ಲಿ ಅಬಿವೃದ್ದಿ ಕೆಲಸವನ್ನು ನಿಲ್ಲಿಸಿದ್ದಾರೆ. ಮಾಜಿ ನಗರಸಭಾ ಅಧ್ಯಕ್ಷೆ ಯ ಪತಿ ಕಾಂಗ್ರೆಸ್ ಮುಖಂಡನ ಇಂತಹ ಕೆಲಸಕ್ಕೆ ಸ್ಥಳೀಯ ನಾಗರಿಕರಿಗೆ ನೋವು ತಂದಿದೆ.

ಕೊಡವೂರು ವಾರ್ಡಿನಲ್ಲಿ ಅನೇಕ ಅಬಿವೃದ್ದಿ ಕಾರ್ಯದ ಮೂಲಕ 2 ಕೆರೆಗೆ ಕಲ್ಲು ಕಟ್ಟಿಸುವ ಕಾರ್ಯ ನಡೆದಿದ್ದು, ಕೊಡವೂರು ವಾರ್ಡಿನಲ್ಲಿ ನಡೆಯುವ ಅಭಿವೃದ್ದಿ, ಸೇವಾ ಕಾರ್ಯವನ್ನು ಗಮನಿಸಿ ಕಾಂಗ್ರೆಸ್ ಮುಖಂಡನ ನಡೆಗೆ ನಾಗರಿಕರು ವಿರೋಧವನ್ನು ಮಾಡಿದ್ದಾರೆ.

ಇದು ಕೇವಲ ಒಂದು ಪಕ್ಷಕ್ಕೆ ತಡೆ ತರುವುದು ಮಾತ್ರವಲ್ಲ ಇದು ಕೊಡವೂರಿನ ಸಮಗ್ರ ಅಭಿವೃದ್ಧಿಗೆ ತಡೆ ತರುವುದು ಆಗಿದೆ ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

ಈ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ವಿಜಯ್ ಕೊಡವೂರು ಅವರನ್ನು ಮಾತನಾಡಿಸಿದಾಗ ಈ ಬಗ್ಗೆ ಅಂತರ್ ಜಲ ಹೆಚ್ಚು ಮಾಡಿ ಸ್ಥಳೀಯ ಭಾಗದಲ್ಲಿ ನೀರಿನ ಕೊರತೆ ದೂರ ಮಾಡುವ,

ಉದ್ದೇಶದಿಂದ ಹಾಗೂ ಸಂಜೆ ವೇಳೆಗೆ ಈ ಭಾಗದ ವಯೋವೃದ್ಧರು, ಮಕ್ಕಳು ಮತ್ತು ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಡುವ ವಾಕಿಂಗ್ ಟ್ರಾಕ್ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕಾಮಗಾರಿ ಆರಂಭ ಮಾಡಲಾಗಿತ್ತು

ಇದಕ್ಕೆ ತೊಂದರೆ ಉಂಟು ಮಾಡಿರುವುದು ನಿಜಕ್ಕೂ ಬೇಸರ ತಂದಿದ್ದೆ ಇನ್ನಾದರೂ ಅಭಿವೃದ್ದಿ ಯೋಜನೆ ಗಳ ಅನುಷ್ಠಾನ ಗಳಲ್ಲಿ ರಾಜಕೀಯ ಮಾಡದೆ ನಮ್ಮ ಜೊತೆ ಅಂತಹ ವ್ಯಕಿ ಗಳು ಕೈ ಜೋಡಿಸುವಂತಾಗಲಿ  ಎಂದು ಮಾದ್ಯಮ ಗಳಿಗೆ ತಿಳಿಸಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಪಡುಬಿದ್ರಿ  ಕಡಲು ಕೊರೆತದಿಂದ ರಕ್ಷಣೆಗೆ  ತಡೆಗೋಡೆ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ ವಿ ಅಮೀನ್ ಮನವಿ

ಪಡುಬಿದ್ರಿ, ಜು. 4:** ಉಡುಪಿ ಜಿಲ್ಲೆಯ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಟಣ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ...

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...